Theft :ಕುಂದೂರು-ಕೂಲಂಬಿ ಕಾಲೇಜಿನಲ್ಲಿ ಕಳ್ಳತನ : ಇಬ್ಬರ ಬಂಧನ
ದಾವಣಗೆರೆ: ಇತ್ತೀಚೆಗೆ ಹೊನ್ನಾಳಿ ತಾಲ್ಲೂಕು ಕುಂದೂರು-ಕೂಲಂಬಿ ಗ್ರಾಮದ ಸರ್ಕಾರಿ ಪದವ ಪೂರ್ವ ಕಾಲೇಜಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕುಂದೂರು ಗ್ರಾಮದ ಆಂಜನೇಯ (22) ಆಕಾಶ್ (22) ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾಲೇಜಿನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇವರು ಕಾಲೇಜಿನ ಕೊಠಡಿಯಲ್ಲಿದ್ದ 84,353 ರೂ. ಮೌಲ್ಯದ ಯುಪಿಎಸ್ ಬ್ಯಾಟರಿ, ಲ್ಯಾಪ್ ಟಾಪ್, ಡಿಜಿಟಲ್ ಪ್ರಾಜೆಕ್ಟರ್ ಕಳ್ಳತನ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಉಪಾಧೀಕ್ಷಕ ಡಾ.ಸಂತೋಷ್ ಕೆ.ಎಂ., ಪಿಐ ಹೆಚ್.ಎಂ. ಸಿದ್ದೇಗೌಡ, ಎಎಸ್ಐ ಪರಶುರಾಮಪ್ಪ, ಸಿಬ್ಬಂದಿ ರಾಜು ಕೆ, ಧರ್ಮಪ್ಪ, ವಿಕ್ರಮ್, ಚೇತನ್, ಜಗದೀಶ್, ಮಂಜುನಾಥ್, ರಂಗನಾಥ್ ಅವರನ್ನು ಎಸ್ಪಿ ಅರುಣ್ ಕುಮಾರ್ ಪ್ರಶಂಸಿಸಿದ್ದಾರೆ.