ವಿಟಿಯು ಪರೀಕ್ಷೆಯಲ್ಲಿ ಬಿಐಇಟಿ ಕಾಲೇಜ್ ರಾಜ್ಯಕ್ಕೆ 5ನೇ ಸ್ಥಾನ : ಎಸ್.ಎಸ್, ಎಸ್ಎಸ್ಎಂ, ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ದಾವಣಗೆರೆ : ರಾಜ್ಯದ ಪ್ರತಿಷ್ಠಿತ ತಂತ್ರಜ್ಞಾನ ಕಾಲೇಜುಗಳಲ್ಲಿ ಒಂದಾದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು 14 ರ್ಯಾಂಕುಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಹಾಗೂ ರ್ಯಾಂಕ್ ಗಳಿಕೆಯಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ಸ್ಥಾನವನ್ನು ಬಿಐಇಟಿ ಕಾಲೇಜು ಪಡೆದಿದೆ ಎಂದು ಕಾಲೇಜಿನ ನಿರ್ದೇಶಕರಾದ ಪ್ರೊ. ವೈ. ವೃಷಬೇಂದ್ರಪ್ಪ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-21ನೇ ವರ್ಷದ ಪರೀಕ್ಷೆಗಳಲ್ಲಿ 14 ರ್ಯಾಂಕ್ ಗಳಿಸುವ ಮೂಲಕ ಹೆಮ್ಮೆ ತಂದಿದ್ದಾರೆ.
ಜವಳಿ ವಿಭಾಗದಲ್ಲಿ ಜಮೀರ್ ಅಸ್ಲಾಮ್ ಬರ್ಗಿರ್ ಪ್ರಥಮ ರ್ಯಾಂಕ್ ಮತ್ತು ಹಿತೇಶ್ ದಾಸ್ ಎರಡನೇ ರ್ಯಾಂಕ್ ಪಡೆದಿರುತ್ತಾರೆ. ಎಶ್ರಾಜ್ ಪಾಟೀಲ್ ಇವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಮತ್ತು ಚೈತ್ರಾ ಎಸ್. ಇವರು ಜವಳಿ ವಿಭಾಗದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಪ್ರಮೋದ್ ಪಿ. ಅಕಸಹತಾ ಎನ್.ಬಿ., ರಂಜಿತಾ ಎಚ್.ಕೆ. ಮತ್ತು ಪ್ರಗತಿ ಜಿ. ಇವರು ಕ್ರಮವಾಗಿ 5.6.7 ಮತ್ತು 10ನೇ ರ್ಯಾಂಕ್ ಪಡೆದಿರುತ್ತಾರೆ. ಎಂ.ಟೆಕ್ ಪರಿಸರ ತಂತ್ರಜ್ಞಾನ ವಿಭಾಗದಲ್ಲಿ ಕೆ. ಸುಚಿತ್ರಾ ಮೊದಲ ರ್ಯಾಂಕ್ ಪಡೆದರೆ, ಮೋಹನ್ ರಾಜ್ ಬಿ. ಮತ್ತು ಉಮೇಶ್ ಎಚ್.ಎಲ್ ಇವರು 3 ಮತ್ತು 5ನೇ ರ್ಯಾಂಕ್ಗಳನ್ನು ಗಳಿಸಿದ್ದಾರೆ. ಭೂಮಿಕಾ ಕೆ.ವಿ. ಮತ್ತು ಮಹಮ್ಮದ್ ಮುನ್ನಾನ್ ಇವರು ಕ್ರಮವಾಗಿ 6 ಮತ್ತು 10ನೇ ರ್ಯಾಂಕನ್ನು ಎಂ.ಟೆಕ್. ಸ್ಟçಕ್ಚರ್ ವಿಭಾಗದಲ್ಲಿ ಪಡೆದಿರುತ್ತಾರೆ. ಸ್ವಾತಿ ಆರ್.ಕೆ. ಇವರು ಎಂ.ಬಿ.ಎ ನಲ್ಲಿ 9ನೇ ರ್ಯಾಂಕ್ ಪಡೆದಿರುತ್ತಾರೆ.
ಇದಲ್ಲದೇ, ಜಮೀರ್ ಅಸ್ಲಾಮ್ ಬರ್ಗಿರ್ ಇವರು ಜವಳಿ ವಿಭಾಗದಲ್ಲಿ ಮತ್ತು ಕೆ. ಸುಚಿತ್ರಾ ಇವರು ಎಂ.ಟೆಕ್ ಪರಿಸರ ತಂತ್ರಜ್ಙಾನ ವಿಭಾಗದಲ್ಲಿ ವಿಶ್ವವಿದ್ಯಾಲಯ ಬಂಗಾರದ ಪದಕಗಳನ್ನು ಪಡೆದು ಬಿಐಇಟಿ ಕಾಲೇಜಿಗೆ ಹೆಮ್ಮೆಯ ಕೊಡುಗೆಯನ್ನು ನೀಡಿದ್ದಾರೆ. ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿಗಳಾದ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಅಧ್ಯಕ್ಷರಾದ ರಾಜನಹಳ್ಳಿ ರಮಾನಂದ ಬಿಐಇಟಿ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ ಹಾಗೂ ಪ್ರಾಂಶುಪಾಲರಾದ ಡಾ. ಎಚ್.ಬಿ ಅರವಿಂದ್ ಇವರು ಬಿಐಇಟಿಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಡೀನ್ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕ ಡೀನ್ ಡಾ. ಈ.ಪಿ. ದೇಸಾಯಿ, ಪ್ರಾಂಶುಪಾಲರಾದ ಡಾ. ಎಚ್.ಬಿ. ಅರವಿಂದ, ಡಾ.ಶಂಕರ್ಮೂರ್ತಿ, ಪ್ರೊ. ಆಶಾಲತಾ, ಡಾ. ನಿರ್ಮಲ, ಡಾ. ಶರಣ್ ಉಪಸ್ಥಿತರಿದ್ದರು.