ಬಾಡಿಗೆಗೆ ಇದ್ದ ಮಹಿಳೆಯಿಂದ ಮನೆ ಮಾಲೀಕರ ಮನೆಯಲ್ಲಿ ಕಳ್ಳತನ;  ಆರೋಪಿತಳ ಬಂಧನ, ಸ್ವತ್ತು ವಶ

IMG-20241006-WA0017

ದಾವಣಗೆರೆ:  ದಿನಾಂಕ:01.10.2024 ರಂದು ಸಂಜೆ ಶ್ರೀ ಪಿ. ಪ್ರಕಾಶ್, ಭಗತ್ ಸಿಂಗ್ ನಗರ ದಾವಣಗೆರೆ ರವರು ಠಾಣೆಗೆ ಹಾಜರಾಗಿ ನಮ್ಮ ಮನೆಯಲ್ಲಿಟ್ಟಿದ್ದ ಒಟ್ಟು ಸುಮಾರು 63 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿದ್ದು ನಮ್ಮ ಮನೆಯ 1 ನೇ ಮಹಡಿಯ ಮನೆಯಲ್ಲಿ ಬಾಡಿಗೆಗೆ ಇದ್ದ ಶ್ರೀಮತಿ ತನುಜಾ ರವರ ಮೇಲೆ ಅನುಮಾನವಿರುತ್ತದೆ ಎಂದು ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಲಾಗಿತ್ತು, ದೂರಿನ ಮೇರೆಗೆ ಕೆಟಿಜೆ ನಗರ ಠಾಣಾ ಗುನ್ನೆ 170/2024 ಕಲಂ-448, 380 ಐಪಿಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಸದರಿ ಕೇಸಿನಲ್ಲಿ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ್ ಎಮ್. ಸಂತೋಷ್ ಮತ್ತು ಶ್ರೀ ಮಂಜುನಾಥ. ಜಿ. ರವರು ಹಾಗೂ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಲ್ಲೇಶ್ ದೊಡ್ಡಮನಿರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುನಿಲ್ ಕುಮಾರ್ ಹೆಚ್.ಎಸ್ & ಪಿ.ಎಸ್.ಐ ಶ್ರೀ ಸಾಗರ್ ಅತ್ತರವಾಲಾ ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.

ಸದರಿ ತಂಡವು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತಳಾದ ಶ್ರೀಮತಿ ತನುಜಾ.ವಿ., 24 ವರ್ಷ, ಗೃಹಿಣಿ, ಕೊಟ್ಟೂರೇಶ್ವರ ಬಡಾವಣೆ, ನಿಟ್ಟುವಳ್ಳಿ, ದಾವಣಗೆರೆ. ಸ್ವಂತ ಊರು ಐಗೂರು ಗ್ರಾಮ ರವರನ್ನು ಬಂಧಿಸಿ, ಆರೋಪಿತಳಿಂದ ಒಟ್ಟು 3,24,800/-ರೂ ಬೆಲೆಯ 63 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ  ಯಶಸ್ವಿಯಾಗಿರುತ್ತಾರೆ.

ಪತ್ತೆ ಕಾರ್ಯ ತಂಡಕ್ಕೆ ಶ್ಲಾಘನೆ: ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುನಿಲ್ ಕುಮಾರ್ ಹೆಚ್.ಎಸ್., & ಪಿ.ಎಸ್.ಐ ಶ್ರೀ ಸಾಗರ್ ಅತ್ತರವಾಲಾ ಮತ್ತು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡಸಿದ್ದಪ್ಪ, ಪುರುಶೋತ್ತಮ, ಗಣೇಶ, ರವಿನಾಯ್ಕ್, ಶ್ರೀಮತಿ ಗೌರಮ್ಮ, ಶ್ರೀಮತಿ ಗೀತಾ, ಭಾವನ ಬೆಳ್ಳೋಡಿ, ರೇಣುಕಾ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!