ಲೋಕಲ್ ಸುದ್ದಿ

ಜಮೀನು ವಿವಾದ ಎರಡು ಕುಟುಂಬಗಳ ನಡುವೆ ವೈಷಮ್ಯ.! ಚನ್ನಗಿರಿಯಲ್ಲಿ ಸ್ವಂತ ಅಕ್ಕನ ಕೊಲೆಗೈದ ತಮ್ಮ

ಜಮೀನು ವಿವಾದ ಎರಡು ಕುಟುಂಬಗಳ ನಡುವೆ ವೈಷಮ್ಯ.! ಚನ್ನಗಿರಿಯಲ್ಲಿ ಸ್ವಂತ ಅಕ್ಕನ ಕೊಲೆಗೈದ ತಮ್ಮ

ಚನ್ನಗಿರಿ : ತಾಲ್ಲೂಕಿನ ಗುಳ್ಳಹಳ್ಳಿ ಗ್ರಾಮದಲ್ಲಿ ಜಮೀನು ವ್ಯಾಜ್ಯ ಸಂಬಂಧ ಎರಡು ಕುಟುಂಬಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ವೃದ್ಧೆಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಗ್ರಾಮದ ಅಕ್ಕಮ್ಮ (64) ಕೊಲೆಯಾದವರು. ಜಮೀನು ವಿಚಾರವಾಗಿ ಗ್ರಾಮದ ಶಿವಕುಮಾರ್ ಹಾಗೂ ಪ್ರಭಾಕರ್ ಅವರ ಕುಟುಂಬಗಳ ನಡುವೆ ವೈಷಮ್ಯವಿತ್ತು. ಕೋರ್ಟ್ ಆದೇಶದಂತೆ ಜಮೀನು ಸರ್ವೆ ಮಾಡಿಸಲು, ಶಿವಕುಮಾರ್ ಹಾಗೂ ಅಕ್ಕಮ್ಮ ಸೇರಿದಂತೆ 9 ಮಂದಿಗೆ ನೋಟಿಸ್ ಬಂದಿತ್ತು. ಅದರಂತೆ ಸರ್ವೆ ಕಾರ್ಯಕ್ಕೆ ಎಲ್ಲರೂ ಜಮೀನಿಗೆ ಹೋದಾಗ ದಿಲೀಪ್ ಎಂಬಾತ ಶಿವಕುಮಾರ್ ಕುತ್ತಿಗೆ ಹಿಡಿದು ಜಗಳ ತೆಗೆದ. ಜಗಳದ ವೇಳೆ ಪ್ರಭಾಕರ ಅಕ್ಕಮ್ಮ ಅವರ ತಲೆಗೆ ಕಣಿಗೆ (ದೊಣ್ಣೆ)ಯಿಂದ ಹಲ್ಲೆ ಮಾಡಿದ. ಅಕ್ಕಮ್ಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top