ಕ್ರೈಂ ಸುದ್ದಿ

ಯುವತಿಯ ಕತ್ತುಕೊಯ್ದು ಯುವಕ ಆತ್ಮಹತ್ಯೆ

ಯುವತಿಯ ಕತ್ತುಕೊಯ್ದು ಯುವಕ ಆತ್ಮಹತ್ಯೆ

ಹುಳಿಯಾರು: ಯುವಕನೊಬ್ಬ ಯುವತಿಯ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಆತನು ಆತ್ಮಹತ್ಯೆ ಮಾಡಿಕೊಂಡ ಘಟನೆ, ಹೋಬಳಿಯ ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ.

ಭಟ್ಟರಹಳ್ಳಿಯ ಸಿದ್ದರಾಮಯ್ಯ ಅವರ ಪುತ್ರ ಬಿ.ಎಸ್.ವಿನಯಕುಮಾರ್‌(26) ಮೃತ ಯುವಕ. ಇದೇ ಗ್ರಾಮದ ದಿ.ಕಲ್ಲೇಗೌಡರ ಪುತ್ರಿ ಕೆ.ಜೀವಿತಾ (17) ಹಲ್ಲೆಗೊಳಗಾದ ಯುವತಿ.

ಜೀವಿತಾ ದೊಡ್ಡಬಿದರೆ ಗ್ರಾಮದವರಾಗಿದ್ದು, ತಾಯಿಯ ಜತೆ ಭಟ್ಟರಹಳ್ಳಿಯ ಅಜ್ಜಿ ಮನೆಯಲ್ಲಿ ವಾಸವಿದ್ದರು. ತುಮಕೂರಿನ ಕಾಲೇಜಿನಲ್ಲಿ ಓದುತ್ತಿದ್ದು, ಇದೇ ವರ್ಷ ದ್ವಿತೀಯ ಪಿಯು ಉತ್ತೀರ್ಣರಾಗಿದ್ದರು.

ವಿನಯಕುಮಾರ್‌ ಗ್ರಾಮದ ಸಿದ್ದರಾಮೇಶ್ವರ ದೇಗುಲದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ಈ ಇಬ್ಬರು ಪ್ರೀತಿಸುತ್ತಿದ್ದು ಇತ್ತೀಚೆಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ವಿನಯಕುಮಾರ್‌ ಗುರುವಾರ ಮುಂಜಾನೆ 5.30ರ ವೇಳೆಗೆ ಯುವತಿ ಮನೆಗೆ ತೆರಳಿ ಮಚ್ಚಿನಿಂದ ಯುವತಿಯ ಕುತ್ತಿಗೆಗೆ ಬಲವಾಗಿ ಬೀಸಿದ್ದಾನೆ. ಮರಣಾಂತಿಕವಾಗಿ ಗಾಯಗೊಂಡಿರುವ ಆಕೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ನಡೆಸಿದ ನಂತರ ಕಣ್ಮರೆಯಾಗಿ ವಿನಯ್‌ಕುಮಾರ್‌ಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಗ್ರಾಮದ ಕಲ್ಯಾಣಿ ಬಳಿ ಆತ ತೊಟ್ಟಿದ್ದ ಟೀ ಶರ್ಟ್‌ ಪತ್ತೆಯಾಗಿತ್ತು. ಇದರಿಂದ ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಯಾಣಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top