ಲೋಕಲ್ ಸುದ್ದಿ

ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ : 24 ಲಕ್ಷದ ಮಾಲು ವಶ

ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ : 24 ಲಕ್ಷದ ಮಾಲು ವಶ

ದಾವಣಗೆರೆ: ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ರೂ. ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದ ತಂಡವನ್ನು ಪೊಲೀಸರು ಬಂಧಿಸಿ, ಅವರಿಂದ 24 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಏಪ್ರಿಲ್ 11ರಂದು ಎನ್.ಹೆಚ್.48 ಸರ್ವೀಸ್ ಸ್ತೆಯ ಪಿ.ಬಸವನಗೌಡ ಬಡಾವಣೆ ಬ್ರಿಡ್ಜ್ ಬಳಿ ಭದ್ರಾವತಿಯದೇವರಾಜ್ ಅಡಿಕೆ ಖೇಣಿ ಪಡೆದುಕೊಂಡು, ರೈತರಿಗೆ ಹಣ ನೀಲು 20 ಲಕ್ಷ ರೂ.ಗಳನ್ನು ತನ್ನ ಸ್ನೇಹಿತನಿಂದ ಪಡೆದು ಆಟೋದಲ್ಲಿ ಹೋಗುತ್ತಿದ್ದರು.

ಈ ವೇಳೆ ಐವರು ಮಚ್ಚಿನಿಂದ ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆಂಜನೇಯ ಕಾಟನ್ ಮಿಲ್ ನಿವಾಸಿಗಳಾದ ಸನಾವುಲ್ಲಾ, ಸೈಫುಲ್ಲಾ, ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನ್ನು ವಶಕ್ಕೆ ಪಡೆದು ಅವರಿಂದ ದರೋಡೆ ಮಾಡಿದ್ದ 19 ಲಕ್ಷದ 80 ಸಾವಿರ ನಗದು ಹಣ ಮತ್ತು ಕೃತಕ್ಕೆ ಬಳಿಸಿದ 1 ಲಕ್ಷ 20 ಸಾವಿರ ಬೆಲೆಬಾಳುವ ಒಂದು ಪ್ಯಾಸೆಂಜರ್ ಆಟೋ ಮತ್ತು 2 ಲಕ್ಷ ಬೆಲೆ ಬಾಳುವ ಒಂದು ಮಹೀಂದ್ರಾ ಸುಪ್ರೋ ಪ್ಯಾಸೆಂಜರ್ ಆಟೋ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ ಸಿ ಶೇತಸನದಿ, ಪಿ.ಎಸ್.ಐ ಎಂ.ಎಸ್ ದೊಡ್ಡಮನಿ, ಶ್ರೀಮತಿ ರೇಣುಕಾ ಜಿ.ಎಂ, ಸಿಬ್ಬಂದಿಗಳಾದ ಎ.ಎಸ್.ಐ ನಾಗರಾಜ್, ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜಪ್ಪ.ಟಿ, ಗೋಪಿನಾಥ ಬಿ.ನಾಯ್ಕ್ಕ್, ಲಕ್ಷ್ಮಣ, ಆಂಜನೇಯ, ಮಂಜುನಾಥ ಚಾಲಕರಾದ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!