ಪ್ರಧಾನಿ ನರೇಂದ್ರ ಮೋದಿಯವರ ಆಗಮನವೇ ಪುಣ್ಯ : ಬಾಡದ ಆನಂದರಾಜು

ಪ್ರಧಾನಿ ನರೇಂದ್ರ ಮೋದಿಯವರ ಆಗಮನವೇ ಪುಣ್ಯ : ಬಾಡದ ಆನಂದರಾಜು

ದಾವಣಗೆರೆ : ಇಡೀ ವಿಶ್ವವೇ ಭಾರತವನ್ನ ನೋಡುವಂತೆ ಮಾಡಿದ ವಿಶ್ವಗುರು ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಾವಣಗೆರೆ ನಗರಕ್ಕೆ ಆಗಮಿಸುತ್ತಿರುವುದು ನಮ್ಮ ಪುಣ್ಯ ಎಂದು ಶೋಷಿತರ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಾಡದ ಆನಂದರಾಜ್ ತಿಳಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಭಾರತ ದೇಶವನ್ನ ಅಭಿವೃದ್ಧಿಯತ್ತ ಕೊಂಡುಯ್ದು ಭ್ರಷ್ಟಾಚಾರ ವಿಲ್ಲದೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಾ ಇತಿಹಾಸ ನಿರ್ಮಿಸಿದ ಹೆಮ್ಮೆಯ ಪ್ರಧಾನಿಗಳು ನರೇಂದ್ರ ಮೋದಿಯವರು. ಶೋಷಿತ ವರ್ಗಗಳಿಗೆ ಹೆಚ್ಚು ಪ್ರಾಧ್ಯನತೆ ನೀಡಿರುವ ರಾಷ್ಟ್ರಪತಿ ಹುದ್ದೆ ಮತ್ತು ಶೋಷಿತ ಸಮಾದಾಯಗಳಿಗೆ ಸಂವಿಧಾನಕ ಹಕ್ಕು ಅದೇರೀತಿ ಗೊಲ್ಲರಹಟ್ಟಿಗಳಿಗೆ ಲಂಬಣಿ ಹಟ್ಟಿಗಳ ಸಮೂದಾಯದವರಿಗೆ ಕಂದಾಯ ಗ್ರಾಮಗಳು ಎಂದು ಹಕ್ಕು ಪತ್ರ ನೀಡಲಿದ್ದಾರೆ . ಇದೇ 25 ರಂದು ದಾವಣಗೆರೆ ನಗರಕ್ಕೆ ಆಗಮಿಸುತ್ತಿದ್ದ ಶೋಷಿತರ ವರ್ಗಗಳ ಒಕ್ಕೂಟ ಸ್ವಾಗತಿಸುತ್ತದೆ ಎಂದು ಬಾಡದ ಆನಂದರಾಜ್ ತಿಳಿಸಿದರು. ದಾವಣಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಇದಕ್ಕೆ ನಾವು ಸಹ ಸಂಪೂರ್ಣ ಬೆಂಬಲ ನೀಡಿದ್ದು. ಜಿಲ್ಲೆಯ ಸೋಲಿಲ್ಲದ ಸರದಾರ ಮೋದಿಯಷ್ಟೇ ಪರಿಪೂರ್ಣತೆಯಿರುವ ಸಂಸದ ಜಿಎಂ.ಸಿದ್ದೇಶ್ವರರವರ ನೇತೃತ್ವದಲ್ಲಿ ನಡೆಯಲಿರುವ ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿ ಐತಿಹಾಸಿಕ ಸಮಾವೇಶ ಇತಿಹಾಸ ಸೇರುವಂತಾಗಲಿ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!