ಮೇಯರ್ ಹಾಗೂ ಆಯುಕ್ತರಿಂದ ಬಸಾಪುರದ ರುದ್ರಭೂಮಿ ಸ್ಥಳ ವೀಕ್ಷಣೆ.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆಯ 21 ನೇ ವಾರ್ಡ್ ಬಸಾಪುರ ಗ್ರಾಮದ ರುದ್ರಭೂಮಿ ಸ್ಥಳವನ್ನೂ ಮೇಯರ್ ಹಾಗೂ ಆಯುಕ್ತರು ವೀಕ್ಷಣೆ ಮಾಡಿ ಸಮಸ್ಯೆಗಳನ್ನು ಪರಿಶೀಲಿಸಿದರು, ಸುಮಾರು 4 ಸಾವಿರ ಜನಸಂಖ್ಯೆ ಇರುವ ಬಸಾಪುರ ಗ್ರಾಮದಲ್ಲಿ ಕೇವಲ ಒಂದೇ ರುದ್ರಭೂಮಿಯಿದ್ದು, ಅದು ಸಹ ಸಾರ್ವಜನಿಕರ ಉಪಯೋಗಕ್ಕೆ ಬರದ ಸ್ಥಿತಿಯಲ್ಲಿರುವುದನ್ನು ಕಂಡ ಮೇಯರ್ ವಿನಾಯಕ ಪೈಲ್ವಾನ್ ಹಾಗೂ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಪಕ್ಕದಲ್ಲಿರುವ ಹಳ್ಳದ ನೀರು ರುದ್ರಭೂಮಿಯೊಳಗೆ ಬರುತ್ತಿದ್ದು, ಹಳ್ಳದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ನೀರನ್ನು ಸರಗವಾಗಿ ಮುಂದೆ ಹೋಗುವಂತೆ ಮಾಡಿದರೆ, ಮುಂದೆ ಆಗುವಂತಹ ಅನಾಹುತ ತಪ್ಪಿಸಬಹುದು ಎಂದು ಗ್ರಾಮಸ್ಥರು ಮನವಿ ಮಾಡಿದರು.
ರುದ್ರ ಭೂಮಿಗೆ ಕಾಂಪೌಂಡ್, ಗ್ರಾವಲ್ ಹಾಗೂ ಸರ್ವೆ ಮಾಡುವ ಮೂಲಕ ಒತ್ತುವರಿಯಾಗಿರುವ ರುದ್ರಭೂಮಿ ಜಾಗವನ್ನು ಬಿಡಿಸಿಕೊಳ್ಳಲು ಬೇಕಾದ ಕ್ರಮ ತೆಗೆದುಕೊಳ್ಳಲು ಮೇಯರ್ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಎಸ್ ಕೊಟ್ರಯ್ಯ, ಕೆ.ಎಲ್.ಹರೀಶ್, ಎಸ್. ಸುರೆಂದ್ರಪ್ಪ, ವಿಜಯ್ ಕುಮಾರ್, ಏನ್.ಎಂ ಕೊಟ್ರಯ್ಯ, ದೇವೇಂದ್ರಪ್ಪ, ಕರಿಬಸಪ್ಪ, ನಾಗರಾಜ್, ಸತೀಶ್ ಪೈಲ್ವಾನ್ ಪಾಲಿಕೆಯ ಇಂಜಿನಿಯರ್ ಗಳದ ಹರ್ಷಿತಾ, ಮಧುಸೂಧನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.