ಪೌತಿ ಖಾತೆಗೆ ಲಂಚ: ಕಂದಾಯ ಅಧಿಕಾರಿ ಗುಮಾಸ್ತ ಲೋಕಾಯುಕ್ತ ಭಲೆಗೆ

ಪೌತಿ ಖಾತೆಗೆ ಲಂಚ: ಕಂದಾಯ ಅಧಿಕಾರಿ ಗುಮಾಸ್ತ ಲೋಕಾಯುಕ್ತ ಭಲೆಗೆ
ಚಿಕ್ಕಮಗಳೂರು : ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ಲಂಚ ಪಡೆಯುತ್ತಿದ್ದ ಪುರಸಭೆ ಕಂದಾಯ ಅಧಿಕಾರಿ ಹಾಗೂ ಗುಮಾಸ್ತನನ್ನು ಲೋಕಾಯುಕ್ತ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲ್ಲೂಕು ಬೀರೂರು ಪುರಸಭೆಯ ಕಂದಾಯ ಅಧಿಕಾರಿ ಯೋಗೀಶ್ ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕಚೇರಿಯಲ್ಲಿ 8 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಲಾಯುಕ್ತ ಡಿ.ವೈ.ಎಸ್ಪಿ. ತಿರುಮಲೇಶ್, ಪಿ.ಎಸ್.ಐ. ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.