ರಾಜಕಾರಣಿಗಳಿಗೆ ನಿದ್ದೆಗೆಡಿಸಿದ್ದ ಕಾಮನ್ ಮ್ಯಾನ್ ಎಸ್ ಪಿ ರಿಷ್ಯಂತ್ : ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿದ ಖಡಕ್ ಆಫೀಸರ್

IMG_20230620_083910 (4)

ದಾವಣಗೆರೆ : ಆಗರ್ಭ ಶ್ರೀಮಂತ ಆದ್ರೆ ಕಾಮನ್ ಮ್ಯಾನ್. ತನ್ನ ಸಿಬ್ಬಂದಿಗಳಿಗೆ ಕಷ್ಟ ಅಂತ ಹೋದ್ರೆ ಎಂದಿಗೂ ಕೈ ಬಿಡದ ಅಧಿಕಾರಿ… ನನ್ನ ಜತೆ ನನ್ನ ಸಿಬ್ಬಂದಿಗಳೂ ಸಹ ಚೆನ್ನಾಗಿರಬೇಕೆಂಬ ಮನೋಭಾವ.. ಆದ್ರೆ ತಪ್ಪು ಮಾಡಿದ್ರೆ ಅವ್ರ ಎಷ್ಟೇ ಆಪ್ತರಾದರೂ ಕಂಬಿ ಹಿಂದೆ ಹೋಗಲೇಬೇಕು…

ಖಡಕ್ ಆಫೀಸರ್ಸ್‌ ಅಂತಲೇ ಹೆಸರುವಾಸಿಯಾದ ಇವರು ರೌಡಿಗಳಿಗೆ ಸಿಂಹಸ್ವಪ್ನ, ರೈತರ ಪಾಲಿಗೆ ದೇವರು, ರಾಜಕಾರಣಿಗಳಿಗೆ ವಿಲನ್ ಆಗಿದ್ದು, ಸದ್ಯ ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿದ್ದಾರೆ. 2013ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಇವರಾಗಿದ್ದಾರೆ. ಬೆಂಗಳೂರಿನಲ್ಲಿ ಎಂಕಾಂ ಓದಿ, ದೆಹಲಿಗೆ ಚಾರ್ಟೆಡ್ ಅಕೌಂಟ್ ಆಗಿ ಹೋಗಿದ್ದ ಇವರು, ಗೆಳೆಯರೊಬ್ಬರನ್ನು ನೋಡಿ ರಾತ್ರಿ-ಹಗಲನ್ನೇದೇ ಉನ್ನತ ಶ್ರೇಣಿಗೆ ಹೋದವರೇ ಸಿ.ಬಿ ರಿಷ್ಯಂತ್ ಐಪಿಎಸ್.

ಎಸ್ ಪಿ ರಿಷ್ಯಂತ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕನಾಯಕನಹಳ್ಳಿಯಲ್ಲಿ ಪ್ರೋಬೇಷನರ್ ಆಗಿ ಸೇವೆ ಸಲ್ಲಿಸಿದ ಅವರು ಮಂಗಳೂರಿನಲ್ಲಿ ಎಎಸ್ಪಿಯಾಗಿ ಚೊಚ್ಚಲ ಪೋಸ್ಟಿಂಗ್ ಪಡೆದರು. ಮೈಸೂರಿಗೆ ವರ್ಗಾವಣೆಯಾಗುವ ಮುನ್ನ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ದಾವಣಗೆರೆ ಬಂದ ಎಸ್ಪಿ ರಿಷ್ಯಂತ್ ಪ್ರಸ್ತುತ ಕಡಲನಾರೆ ಮಂಗಳೂರಿಗೆ ಹೋಗಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ತನ್ನದೇ ಸ್ಟೈಲ್‌ನಲ್ಲಿ ಎಡೆಮುರಿಕಟ್ಟಿದವರ ಸಾಲಿಗೆ ಎಸ್ಪಿ ರಿಷ್ಯಂತ್ ಸೇರುತ್ತಾರೆ.

ಚುನಾವಣೆ ಪೂರ್ವದಲ್ಲಿ ತನ್ನ ಮಾವ ಮುನಿರತ್ನ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಗೆ ನಿಂತ ಕಾರಣ ಅವರಿಗೆ ಪೋಸ್ಟಿಂಗ್ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ನಂತರ ಮಂಗಳೂರಿನಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ.ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಇವರನ್ನು ಪೂರ್ಣಾವಧಿಗೆ ಅವರನ್ನು ಮಂಗಳೂರು ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ನಾನು ಮಂಗಳೂರಿನಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದೇನೆ, ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಜಿಲ್ಲೆ ವಿಶಿಷ್ಟವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಎಸ್ಪಿ ರಿಷ್ಯಂತ್.

ಕರ್ನಾಟಕದಲ್ಲಿ ಉತ್ತಮ ಅಧಿಕಾರಿಯೆಂದೇ ಖ್ಯಾತ ನಾಮ ಪಡೆದಿರುವ ಎಸ್ಪಿ ಸಿ.ಬಿ.ರಿಷ್ಯಂತ್ ಸುಮಾರು 12 ವರ್ಷಗಳ ಕಾಲ ಕುಟುಂಬ ಬಿಟ್ಟು ಹೊರೆಗೆ ಇರುತ್ತಾರೆ. ಅವರಿಗೆ ಅಮ್ಮ, ಪತ್ನಿ ಜತೆ ಇಲ್ಲದೇ ಇರುವ ಒಂಟಿತನ ಆಗಾಗ ಕಾಡುತ್ತಿರುತ್ತದೆ. ತಾಯಿ ಸಿ.ಭಾನುಮತಿ ಎಸ್ಪಿ ರಿಷ್ಯಂತ್‌ಗೆ ಮೊದಲ ಗುರು. ತಂದೆ ಕೃಷ್ಣ ಚೇತನ್ಯ ಸಾಧನೆಗೆ ನೀರೆರದವರು. ಪತ್ನಿ ಎನ್.ಭಾರತಿ ಬಿಬಿಎಂ ಓದಿದ್ದಾರೆ. ಈಗ ಎಲ್ ಎಲ್‌ಬಿ ಮಾಡುತ್ತಿದ್ದಾರೆ. ಮಗಳು ತ್ರಿಶತಿಗೆ ಅಪ್ಪ ಎಂದರೆ ಪಂಚಪ್ರಾಣ..ಐಪಿಎಸ್ ಅಥವಾ ಐಎಎಸ್ ಓದುವ ಆಸೆ ಹೊಂದಿದ್ದಾಳೆ… ಇದು ಎಸ್ಪಿ ರಿಷ್ಯಂತ್ ಫ್ಯಾಮಿಲಿಯ ಸಣ್ಣ ಹೂರಣ.

ಸದಾ ಲವಲವಿಕೆಯಿಂದ ಇದ್ದ ಎಸ್ಪಿ ರಿಷ್ಯಂತ್ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು, ಸಾರ್ವಜನಿಕರು ಎಂತಹದ್ದೇ ಕಷ್ಟ ಹೇಳಿದರೂ ಅದನ್ನು ಸಮಧಾನವಾಗಿ ಕೇಳಿ ಅದಕ್ಕೆ ಪರಿಹಾರ ನೀಡುವುದು ಅವರ ಹವ್ಯಾಸವಾಗಿತ್ತು. ಇನ್ನು ಮಾನವೀಯತೆವುಳ್ಳ ಎಸ್ಪಿ ರಿಷ್ಯಂತ್ ತನ್ನ ಸಿಬ್ಬಂದಿ ಕಷ್ಟ ಎಂದು ಬಂದಾಗ ಆರ್ಥಿಕವಾಗಿ ಕೈ ಹಿಡಿಯುತ್ತಿದ್ದರು. ದಾವಣಗೆರೆಯಲ್ಲಿ ಕಮ್ಯೂನಲ್ ಘಟನೆ ನಡೆದಾಗ ಅವುಗಳಿಗೆ ಸೂಕ್ತಪರಿಹಾರ ನೀಡುತ್ತಿದ್ದರು. ಬೆಳ್ಳಗ್ಗೆ 10 ಕ್ಕೆ ಕಚೇರಿ ಆಗಮಿಸುತ್ತಿದ್ದ ಎಸ್ಪಿ ಸಂಜೆ ಆರು ಗಂಟೆ ತನಕ ಕೆಲಸ ಮಾಡುತ್ತಿದ್ದರು. ಬದ್ದತೆ ಪ್ರಾಮಾಣಿಕತೆ ಇವರು ಧ್ಯೇಯವಾಗಿದ್ದು, ಯಾರು ಏನೇ ಹೇಳಿದರೂ ಕರ್ತವ್ಯಕ್ಕೆ ಮೋಸ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಮಾನವೀಯತೆ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಸಮಯ ಬಂದಾಗ ಕೋಪಿಸಿಕೊಳ್ಳುತ್ತಿದ್ದರು. ನೋವಾದಾಗ ಮೌನವಹಿಸುತ್ತಿದ್ದರು. ಸಮಸ್ಯೆ ಹೇಳಿಕೊಂಡು ಎಷ್ಟೇ ಜನರೂ ಬಂದ್ರೂ ಅಷ್ಟೇ ತಾಳ್ಮೆಯಲ್ಲಿ ಕೆಲಸ ಮಾಡುತ್ತಿದ್ದರು. ಇದಿಷ್ಟು ಎಸ್ಪಿ ಸಿ.ಬಿ.ರಿಷ್ಯಂತ್‌ರ ಒಂದಿಷ್ಟು ಕಥೆ-ವ್ಯಥೆ.

ಇನ್ನು ಎಸ್ಪಿ ರಿಷ್ಯಂತ್ ಬೆಣ್ಣೆ ನಗರಿ ಬಿಟ್ಟು ಕಡಲನಾರೆಗೆ ಹೋಗಿದ್ದಾರೆ..ಅಲ್ಲಿನ ಅಲೆಗಳ ರುದ್ರತನಕ್ಕೆ ಪುಲ್‌ಸ್ಟಾಪ್ ಹಾಕುವ ಶಕ್ತಿ ಎಸ್ಪಿ ರಿಷ್ಯಂತ್‌ಗೇ ಇದ್ದು, ಜನ ನೋವಿನಿಂದ ಕಳುಹಿಸಿಕೊಡುತ್ತಿದ್ದಾರೆ…. ಹೋಗಿ ಬನ್ನಿ ಸರ್.

ದಾವಣಗೆರೆಯಲ್ಲಿ ಎಸ್ಪಿ ರಿಷ್ಯಂತ್ ಮಾಡಿದ ಕೆಲಸವೇನು
ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷವಿದ್ದ ಇಂಟರ್‌ನ್ಯಾಷನಲ್ ನಟೋರಿಯಸ್ ಇಮ್ರಾನ್ ಸಿದ್ದಿಕ್ ಬಂಧನ, ಈತ ಅಕ್ರಮ ಮರಳು ದಂಧೆಯಲ್ಲಿ ಪೊಲೀಸರಿಂದಲೇ ಹಣ ವಸೂಲಿ ಮಾಡಿಸುತ್ತಿದ್ದ. ಈತನಿಗೆ ಅನೇಕ ದೊಡ್ಡ ಅಧಿಕಾರಿಗಳು ಬೆಂಗಾವಲಾಗಿದ್ದರು. ಈ ನಡುವೆ ಎಸ್ಪಿ ರಿಷ್ಯಂತ್ ಏರ್‌ಪೋರ್ಟ್‌ಗೆ ಹೋದರೂ ಹಿಡಿದು ತಂದು ಜೈಲಿಗೆ ಹಾಕಿದ್ದರು. ಆದ್ರೆ ಕೇಸ್ ಕೊಟ್ಟವನ ಅಪ್ರಾಮಣಿಕತನಕ್ಕೆ ತಲೆ ತಗ್ಗಿಸುವಂತಾಯಿತು, ಕೋರ್ಟ್ ನಿಂದ ಇರ್ಮಾನ್ ಸಿದ್ದಿಕಿ ತನ್ನ ಮೇಲೆ ದಾಖಲಾಗಿದ್ದ ಎರಡೂ ಕೇಸ್ ಗಳನ್ನ ವಜಾ ಮಾಡಿಸಿಕೊಂಡುಬಿಟ್ಟ. ನಡೆದಿರುವ ಘಟನೆಗಳು ಮಾತ್ರ ಸುಳ್ಳಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

 

ರೈತರ ಹಣವನ್ನು ಹಿಂದಿರುಗಿಸಿದ ಖ್ಯಾತಿ:
ರೈತರಿಂದ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿ ಮಾಡಿ ಹಣ ಕೊಡದೇ ಮೋಸ ಮಾಡಿದ ಆರು ಆರೋಪಿಗಳನ್ನು ಬಂಧಿಸಿ ಸುಮಾರು ಎರಡು ಕೋಟಿ ಆರವತ್ತೇಂಟು ಲಕ್ಷದ 91 ಸಾವಿರ ಹಣವನ್ನು ಅನ್ನದಾತರಿಗೆ ವಾಪಸ್ ಕೊಡಿಸಿದ್ದರು. ಬ್ಯಾಂಕ್ ಉದ್ಯೋಗಿಯೊಬ್ಬ ಇದರಲ್ಲಿ ಭಾಗಿಯಾಗಿದ್ದಘಿ. ಈ ಪ್ರಕರಣವನ್ನು ಡಿಸಿಆರ್‌ಬಿ ಬಿ.ಎಸ್.ಬಸವರಾಜ್ ಭೇದಿಸಿದ್ದರು.

 

ಓಜಿ ಕುಪ್ಪಂ ಗ್ಯಾಂಗ್
ಅಂತರಾಜ್ಯ ಕಳ್ಳರಾದ ಓಜಿ ಕುಪ್ಪಂ ಗ್ಯಾಂಗ್‌ನ್ನು ಭೇದಿಸುವಲ್ಲಿ ಎಸ್ಪಿ ರಿಷ್ಯಂತ್ ಯಶಸ್ವಿಯಾಗಿದ್ದುಘಿ, 4 ಪ್ರಕರಣಗಳಲ್ಲಿ 21 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದರು.

ಕೇರಳ ಮೂಲದ ವ್ಯಕ್ತಿಗೆ ನಕಲಿ ಚಿನ್ನ ನೀಡಿ 22 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದರು. ತರೀಕೆರೆ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದರು.

ಎಲೆಬೇತೂರಿನಲ್ಲಿ ವೃದ್ಧರನ್ನು ಡಬಲ್ ಮರ್ಡರ್ ಮಾಡಿದ ಕೊಲೆಗಾರರನ್ನು ಹಿಡಿದು ಜೈಲಿಗಟ್ಟಿದ್ದರು.

ದಾವಣಗೆರೆಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು, ನಗರದಲ್ಲೇಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಸಿಸಿ ಕ್ಯಾಮೆರಾ, ಸಿಟಿ ವ್ಯಾಪ್ತಿಯಲ್ಲಿ ಎಲ್ಲೆ ಕ್ರೈಂ ನಡೆದರೂ ಕುಳಿತಲ್ಲೇ ವೀಕ್ಷಣೆ ಮಾಡುವ ವ್ಯವಸ್ಥೆ

ಹಲವು ದಿನಗಳಿಂದ ಸ್ಥಳೀಯ ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ ಕಾನ್‌ಸ್ಟೇಬಲ್‌ಗಳನ್ನು ಬೇರೆ ಕಡೆ ಎತ್ತಿ ಹಾಕಿದ ಕೀರ್ತಿ ಎಸ್ಪಿ ರಿಷ್ಯಂತ್‌ರದ್ದು

ರಾತ್ರಿವೇಳೆ ವಸೂಲಿ, ಜೂಜು, ಅಕ್ರಮ ಮರಳು ದಂಧೆಗೆ ತಡೆ, ಕೆಳ ಹಂತದ ಪೊಲೀಸರಿಗೆ ಆಗಾಗ ಎಚ್ಚರಿಕೆ, ಆರೋಪವಿದ್ದರೇ ಸಂಪೂರ್ಣ ತನಿಖೆ ನಂತರ ಅಮಾನತು

*ಸೈಬರ್ ಕ್ರೈಂ, ಡ್ರಗ್ಸ್ ಜಾಗೃತಿ, ಗಾಂಜಾ ದಂಧೆಕೋರರ ವಶ

*ಮಾಜಿ ಸಚಿವ ರೇಣುಕಾಚಾರ್ಯ ತಮ್ಮನ ಪುತ್ರನ ಪ್ರಕರಣದಲ್ಲಿ ರಾತ್ರಿ-ಹಗಲು ಕೆಲಸ, ನಿದ್ದೆಯಿಲ್ಲದೇ ತನಿಖೆ

*ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ, ಉತ್ತಮ ಶಿಕ್ಷಕರ ನೇಮಕ, ಪ್ರಾಕ್ಟಿಕಲ್‌ಗೆ ಒತ್ತು

*ಪೊಲೀಸ್ ಮಕ್ಕಳಿಗೆ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸಿದ ಎಸ್ಪಿ

*ಪೊಲೀಸ್ ಡಾಗ್ ತುಂಗಾ ಎಂಬ ಶ್ವಾನಗೆ ಸಮಾಧಿ ಕಟ್ಟಿಸಿದ ಎಸ್ಪಿ

*ತುಂಗಾಳ ಸಾಧನೆ ಹಿನ್ನೆಲೆಯಲ್ಲಿ ಇನ್ನೊಂದು ಶ್ವಾನಕ್ಕೆ ತುಂಗಾ 2 ಎಂಬ ಹೆಸರು

ಗಣ್ಯರ ಮೇಲೆ ಕೇಸ್

*ಬೆಟ್ಟಿಂಗ್ ಪ್ರಕರಣದಲ್ಲಿ ಹಾಲಿ ಚಿತ್ರದುರ್ಗ ಶಾಸಕ ವೀರೆಂದ್ರ ಪಪ್ಪಿ ಮೇಲೆ ಕೇಸ್

*ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಮೇಲೆ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆಂದು ಕೇಸ್

*ಅಕ್ರಮ ಮರಳು ದಂಧೆ ಆರೋಪ ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ಕೇಸ್

*13 ರೌಡಿಗಳ ಗಡಿಪಾರು, ರೌಡಿ ಶೀಟರ್‌ಗಳಾದ ಮೊಟ್‌ಬೇಳ್ ಸೀನಾ, ಕಣುಮಗೆ ಚಳಿಬಿಡಿಸಿದ್ದ ಎಸ್ಪಿ

ಎಸ್ಪಿ ಎದುರಿಸಿದ್ದ ಸವಾಲು
*ಸಿದ್ದರಾಮೋತ್ಸವದ ವೇಳೆ ಬೈಪಾಸ್‌ನಲ್ಲಿ ಐದು ಕಿ.ಲೋ.ಮೀಟರ್‌ನಷ್ಟು ಟ್ರಾಫಿಕ್ ಜಾಮ್, ನಡೆದುಕೊಂಡು ಬಂದ ಗಣ್ಯರು, ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ

*ಪ್ರಧಾನಿ ನರೇಂದ್ರಮೋದಿ ದಾವಣಗೆರೆಗೆ ಬಂದ ವೇಳೆ ಎಲ್ಲಿಯೂ ತೊಂದರೆಯಾಗದಂತೆ ಭದ್ರತೆ, ಆದರೂ ಪ್ರಧಾನಿ ಬರುವ ವೇಳೆ ಭದ್ರಾತಾ ಲೋಪವಾಗಿದೆಯೆಂಬ ಆರೋಪ

*ಶಿವಮೊಗ್ಗದಲ್ಲಿ ಪ್ರಧಾನಿ ಬಂದ ವೇಳೆ ಪತ್ರಕರ್ತರೊಬ್ಬರ ವಶ, ರಾಜ್ಯಾದ್ಯಂತ ಎಸ್ಪಿ ರಿಷ್ಯಂತ್ ವಿರುದ್ಧ ಪತ್ರಕರ್ತರ ಪ್ರತಿಭಟನೆ

*ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದ ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಪತ್ರರ್ತನೊಬ್ಬನ ಬಂಧನ, ಪತ್ರಕರ್ತರ ಆಕ್ರೋಶ.

*ಆಟೋಗೆ ಮೀಟರ್ ಅಳವಡಿಕೆ, ಭಾರೀ ವಾಹನ ಬರೋದನ್ನು ತಡೆಯೋದಕ್ಕೆ ಸಾಧ್ಯವಾಗದೇ ಇದ್ದದ್ದು.

*ಗಣ್ಯರನ್ನು ಅರೆಸ್ಟ್ ಮಾಡಿದ ವೇಳೆ ಪದೇ, ಪದೇ ರಾಜಕಾರಣಿಗಳ ಒತ್ತಡ

*ಡಿಆರ್ ಕಚೇರಿಯಲ್ಲಿ ಆಕಸ್ಮಿಕ ಗುಂಡಿನ ದಾಳಿಗೆ ಪೊಲೀಸ್ ಪೇದೆ ಮೃತ

ಎಸ್ಪಿ ರಿಷ್ಯಂತ್‌ಗೆ ಸಾಥ್ ನೀಡಿದ ಅಧಿಕಾರಿಗಳು :

ಡಿಸಿಆರ್‌ಬಿ ಡಿಎಸ್ಪಿ ಬಸವರಾಜ್ ಎಸ್ಪಿ ರಿಷ್ಯಂತ್‌ರ ಬಲಗೈ ಭಂಟರಾಗಿದ್ದರು, ಸಾಕಷ್ಟು ಪ್ರಕರಣವನ್ನು ಇವರ ತಂಡವೇ ಭೇದಿಸಿತ್ತು. ಇನ್ನು ಡಿಆರ್ ಡಿಎಸ್ಪಿ ಪ್ರಕಾಶ್ ಪೊಲೀಸ್ ಪಬ್ಲಿಕ್ ಶಾಲೆ ಸೇರಿದಂತೆ, ವಾಹನಗಳ ವ್ಯವಸ್ಥೆ ಹೀಗೆ ಹತ್ತಾರು ಕೆಲಸಗಳನ್ನು ಎಸ್ ಪಿ ಇಷ್ಟಪಡುತ್ತಿದ್ದರು. ಇನ್ನು ಮಹಿಳಾ ಐಪಿಎಸ್‌ಅಧಿಕಾರಿ ಕನ್ನಿಕಾ ಸಿಕ್ರಿವಾಲ್, ಸಿಪಿಐ ದೇವರಾಜ್ ಸೇರಿದಂತೆ ಡಿಎಸ್ಪಿ ಸಂತೋಷ್ ಇವರ ಆಪ್ತವಲಯದಲ್ಲಿ ಹೆಸರು ಮಾಡಿದ್ದ ಅಧಿಕಾರಿಗಳು.

ಒಟ್ಟಾರೆ ದಾವಣಗೆರೆಯಲ್ಲಿ ಇದ್ದ ಅಷ್ಟೂ ದಿನಗಳಲ್ಲಿ ಸಾರ್ವಜನಿಕವಾಗಿ ಉತ್ತಮ ಪ್ರಶಂಸನೀಯ ಮಾತುಗಳು ಬಂದಿದ್ದು ಇದೀಗ ಮುಂದಿನ ಜಿಲ್ಲೆಯಲ್ಲಿ ಇದೇ ವಾತಾವರಣವಿರಲಿ ಎಂಬ ಆಶಯದಿಂದ ಪುನಃ ದಾವಣಗೆರೆ ಜಿಲ್ಲೆಗೆ ಬನ್ನಿ ಎಂದು ಹೃದಯಪುರ್ವವಾಗಿ ಬೀಳ್ಕೊಡಿಗೆ..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!