ಗೂಂಡಾಗಿರಿ ಬೆಳೆಸಿದ್ದು ಕಾಂಗ್ರೆಸ್.! ಕಾಂಗ್ರೆಸ್ಗೆ ಮತ್ತೊಂದು ಹೆಸರೇ ಗೂಂಡಾಗಿರಿ – ರೇಣುಕಾಚಾರ್ಯ

ದಾವಣಗೆರೆ: ನಾವು ಜಾತಿವಾದಿಗಳಲ್ಲ, ಕೋಮುವಾದಿಗಳಲ್ಲ. ಹಿಂದೂ, ಮುಸಲ್ಮಾನ, ಕ್ರೈಸ್ತ ಎಲ್ಲರೂ ಭಾರತ ಮಾತೆಯ ಮಕ್ಕಳು. ಆದರೆ ಕೆಲ ಅಸ್ಪಸಂಖ್ಯಾತ ಗೂಂಡಾಗಳು ಪದೇ ಪದೇ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರ ಬಡಾವಣೆಯ ನಿವಾಸಿ, ಬಜರಂಗದಳದ ಕಾರ್ಯಕರ್ತ ಸುನೀಲ್ ಅವರ ಮೇಲೆ ಜನನಿಬಿಡ ರಸ್ತೆಯಲ್ಲಿ ಹಗಲಿನಲ್ಲಿ ಸಮೀರ್ ಎಂಬಾತ ಸೋಮವಾರ ತಲವಾರ್ ಬೀಸಿ ಹಲ್ಲೆಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಕೆಲ ಗೂಂಡಾಗಳು ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿದ್ದಾರೆ. ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಅವರೀಗ ಜಾಗೃತರಾಗಿದ್ದಾರೆ. ಅಲ್ಪಸಂಖ್ಯಾತರನ್ನೂ ಸಹ ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಯಾವುದೇ ಧರ್ಮ ಅಥವಾ ಸಮುದಾಯದವರಾಗಿರಲಿ ಅವರಿಗೆ ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಶಕ್ಷಣದಿಂದ ವಂಚಿತರಾದವರು ಭಯೋತ್ಪಾದಕರಾಗುತ್ತಾರೆ. ಇಂತಹ ಭಯೋತ್ಪಾದಕರು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ನವರೇ ಕಾರಣ ಎಂದು ಕಿಡಿಕಾರಿದರು.
ಗೂಂಡಾಗಿರಿ ಬೆಳೆಸಿದ್ದೇ ಕಾಂಗ್ರೆಸ್. ಕಾಂಗ್ರೆಸ್ಗೆ ಮತ್ತೊಂದು ಹೆಸರೇ ಗೂಂಡಾಗಿರಿ. ನಮ್ಮ ಸರ್ಕಾರ ಉದ್ಘಟತನ ತೋರುವ ಗೂಂಡಾಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುತ್ತದೆ ಎಂದು ಹೇಳಿದರು.
ಬಿಜೆಪಿಗೂ ಸ್ಯಾಂಟ್ರೋ ರವಿಗೂ ಸಂಬಂಧವಿಲ್ಲ. ಇವರೆಲ್ಲಾ ಕಾಂಗ್ರೆಸ್ ಪೋಷಿಸಿದ ಗೂಂಡಾಗಳು ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.