ಕೊವಿಡ್ ಸೊಂಕು ಪುನಃ ಏರಿಕೆ: ಇಂದೇ ತಜ್ಞರ ತುರ್ತು ಸಭೆ ಕರೆದ ಸಿಎಂ: ಮತ್ತೆ ಲಾಕ್ ಡೌನ್ ಸೂಚನೆಯಾ.!?

IMG-20210813-WA0002

ಉಡುಪಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣದ ಹಿನ್ನೆಲೆಯಲ್ಲಿ ಇಂದೇ ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಸೋಂಕು ಏರುಮುಖವಾಗಿ ಸಾಗುತ್ತಿದೆ. ಆದ್ದರಿಂದ, ಈಗ ಬೆಂಗಳೂರಿಗೆ ತೆರಳಿದ ತಕ್ಷಣ ಇಂದೇ ತಜ್ಞರ ತುರ್ತು ಸಭೆ ಕರೆದು, ಅವರೊಂದಿಗೆ ಚರ್ಚಿಸಿ ತಜ್ಞರ ವರದಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಬೊಮ್ಮಾಯಿ‌ ಅವರ ಪ್ರತಿಕ್ರಿಯೆ ಮತ್ತೆ ರಾಜ್ಯವನ್ನು ಲಾಕ್ಡೌನ್ ಮಾಡುತ್ತಾರ ಅಥವಾ ವಾರಾಂತ್ಯದ ಮತ್ತು ನೈಟ್ ಕರ್ಫ್ಯೂನಲ್ಲೇ ಮೂರನೇ ಅಲೆ ತಡೆಗೆ ಕ್ರಮ ತೆಗೆದುಕೊಳ್ಳುವರೋ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!