ಲೋಕಲ್ ಸುದ್ದಿ

ಡಾ.ಅಂಬೇಡ್ಕರ್‌ ಭಾವಚಿತ್ರ ಪೂಜಿಸದ ವಾರ್ಡನ್‌ ಮೇಲೆ ಕ್ರಮಕ್ಕೆ ದಸಂಸ ಆಗ್ರಹ

ದಾವಣಗೆರೆ :ಗಣರಾಜ್ಯೋತ್ಸವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಡದೇ ಅಪರಾಧವೆಸಗಿದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ವಾರ್ಡನ್ ಸುಧಾ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಆಗ್ರಹಿಸಿದ್ದಾರೆ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಉನ್ನತ ತನಿಖೆ ನಡೆಸಿ, ಸುಧಾ ಅವರನ್ನು ವಾರ್ಡನ್ ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದರು.
ಆರ್.ಮಂಜುನಾಥ್, ಪ್ರದೀಪ್, ದೊಡ್ಡಪ್ಪ, ಬಿ.ಚಿತ್ತಾನಹಳ್ಳಿ ನಾಗರಾಜ್, ಅಣಜಿ ಹನುಮಂತಪ್ಪ, ಶಿವಶಂಕರ್ ಪತ್ರಿಕಾಗೋಷ್ಠಿಯಲ್ಲಿದ್ದರು

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!