2018 ಕ್ಕೂ ಮುನ್ನ ನನ್ನ ಹೆಸರಿನಲ್ಲಿ ಒಂದು ಅಡಿ ಜಾಗ ಇರುವುದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ – ದುಡಾ ಅದ್ಯಕ್ಷ

ದಾವಣಗೆರೆ: 2018 ರಲ್ಲಿ ಲಾಟರಿ ಮೂಲಕ ನನಗೆ ನಿವೇಶನ ಬಂದಿದ್ದು, ಅದಕ್ಕೂ ಮುಂಚೆ ದೇಶದ ಯಾವುದೇ ಭಾಗದಲ್ಲಿ ನನ್ನ ಹೆಸರಿನಲ್ಲಿ ಒಂದು ಅಡಿ ಜಾಗ ಇರುವುದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ದೂಡಾ ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
2018 ರಲ್ಲಿ ಅವರ ತಮಗೂ ಸೇರಿದಂತೆ ತಮ್ಮ ಸಹೋದರರಿಗೆ ದೂಡಾದಿಂದ ನಿವೇಶನಗಳು ಸಿಕ್ಕಿದ್ದವು. ಈ ಬಗ್ಗೆ ದೂಡಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ತಂದೆ ಕೋಟ್ಯಾಧೀಶ್ವರರಿಬಹುದು. ಆದರೆ ನಾನಲ್ಲ. 1996 ರಲ್ಲಿಯೇ ನಾನು ನಮ್ಮ ಕುಟುಂಬದಿಂದ ಬೇರ್ಪಟ್ಟಿದ್ದೆ. 2013ರಲ್ಲಿ ದೂಡಾ ನಿವೇಶನಕ್ಕೆ ಅರ್ಜಿ ಕರೆದಿತ್ತು ನಾನೂ ಕೂಡ ಹಾಕಿದ್ದೆ. ಲಾಟರಿ ಮೂಲಕ ನಿವೇಶನ ತಮಗೆ ದಕ್ಕಿತ್ತು ಎಂದು ಹೇಳಿದರು.
ಬಿಜೆಪಿ ದೂಡಾ ಅಧ್ಯಕ್ಷ ಸ್ಥಾನದ ಆಮಿಷವೊಡ್ಡಿ ನನ್ನನ್ನು ಪಕ್ಷಕ್ಕೆ ಸೆಳೆದಿದೆ ಎನ್ನುವುದು ಸುಳ್ಳು.
ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಸೇರಿದ್ದೆ. ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ಈಗಲೂ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದರೆ ಈಗಲೇ ಕೊಡಲು ಸಿದ್ಧನಿದ್ದೇನೆ. ಪಕ್ಷ ಹೇಳಿದಂತೆ ಕೇಳುವ ಕೆಲಸ ಅಷ್ಟೇ ನನ್ನದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯರಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ್, ಹರಿಹರದ ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್ ಉಪಸ್ಥಿತರಿದ್ದರು.