ದಾವಣಗೆರೆಯಲ್ಲಿ ‘ಮುದ್ದು ಕೃಷ್ಣ ಫೋಟೊ ಸ್ಪರ್ಧೆ’ ಪೋಟೊ ಕಳಿಸಲು ಇಲ್ಲಿದೆ ಮಾಹಿತಿ

ದಾವಣಗೆರೆ: ಜಿಲ್ಲಾ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಸಂಘ ಮತ್ತು ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ‘ಮುದ್ದು ಕೃಷ್ಣ ಫೋಟೊ ಸ್ಪರ್ಧೆ’ ಹಮ್ಮಿಕೊಂಡಿದ್ದು, 1-5 ಮತ್ತು 5-10 ವರ್ಷದ ಮಕ್ಕಳ ಛಾಯಚಿತ್ರ ಸ್ಪರ್ಧೆಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 2222 ರೂ., ದ್ವಿತೀಯ ಬಹುಮಾನ 1111 ರೂ., ಹಾಗೂ 555 ತೃತೀಯ ಬಹುಮಾನ ವಿತರಿಸಲಾಗುತ್ತದೆ. ಆಸಕ್ತರು 100 ರೂ., ಪ್ರವೇಶ ಶುಲ್ಕದೊಂದಿಗೆ ಪ್ರಸಕ್ತ 2021 ರಲ್ಲಿ ತೆಗೆದಿರುವ 9*6 ಅಳತೆಯ ಭಾವಚಿತ್ರವನ್ನು ಸೆ.1 ರೊಳಗಾಗಿ ಪಿಜೆ ಬಡಾವಣೆಯಲ್ಲಿರುವ ಸಂಸ್ಥೆಯ ವಿಳಾಸಕ್ಕೆ ತಲುಪಿಸಬಹುದಾಗಿದ್ದು, ಮೊಬೈಲ್ ಫೋಟೊಗಳಿಗೆ ಅವಕಾಶ ಇಲ್ಲ.
ಹೆಚ್ಚಿನ ಮಾಹಿತಿಗಾಗಿ ಹೆಚ್. ಕೆ. ಸಿ. ರಾಜು 9743210201, ದುಗ್ಗೇಶ್ 9844575246, ವಿಜಯ್ ಜಾಧವ್ 9341011145 ಇವರನ್ನು ಸಂಪರ್ಕಿಸಬಹುದಾಗಿದೆ.