ಇಬ್ಬರು ಬೈಕ್ ಕಳ್ಳರ ಬಂಧನ: 9 ಲಕ್ಷ ಮೌಲ್ಯದ 20 ಬೈಕ್ ವಶಕ್ಕೆ ಪಡೆದ ದಾವಣಗೆರೆ ಪೊಲೀಸರು

IMG-20210821-WA0011

 

ದಾವಣಗೆರೆ: ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ವಶಕ್ಕೆ ಪಡೆದಿರುವ ಕೆಟಿಜೆ ನಗರ ಪೋಲೀಸರು, ₹ 9 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಈ ಬಾಲಕರು ಹಲವು ದಿನಗಳಿಂದ ಚಾಣಾಕ್ಷತನದಿಂದ ಬೈಕ್ ಕದ್ದು ಮಾರಾಟ ಮಾಡುತ್ತಿದ್ದರು. ಈ ಸಂಬಂಧ ನೇಮಿಸಿದ್ದ ತನಿಖಾ ತಂಡ ಜಗಳೂರಿನ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ ಹಲವು ಕಡೆ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದೀಗ ಅವರಿಂದ ಕೆ.ಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ 9 ಬೈಕ್, ವಿದ್ಯಾನಗರ ಪೊಲೀಸ್ ಠಾಣೆಯ 03, ಆಜಾದ್ ನಗರ ಪೊಲೀಸ್ ಠಾಣೆಯ 02, ಬಡಾವಣೆ ಠಾಣೆಯ ಮತ್ತು ದಾವಣಗೆರೆ ಗ್ರಾಮಾಂತರ ಠಾಣೆಯ ತಲಾ 01, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಕೋಟೆ ಠಾಣೆ ಮತ್ತು ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯ ತಲಾ 01, ಬಳ್ಳಾರಿ ಜಿಲ್ಲೆಯ ಖಾನಾ ಹೊಸಳ್ಳಿ ಪೊಲೀಸ್ ಠಾಣೆಯ 02 ಬೈಕ್ ಸೇರಿ ಒಟ್ಟು 20 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಗಳ ಪತ್ತೆ ಕಾರ್ಯದಲ್ಲಿ ದಾವಣಗೆರೆ ನಗರ ಉಪವಿಭಾಗದ ಡಿವೈಎಸ್‌ಪಿ ನಾಗೇಶ ಯು ಐತಾಳ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಗುರು ಬಸವರಾಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅಬ್ದುಲ್ ಖಾದರ್ ಜಿಲಾನಿ ಹಾಗೂ ಪ್ರಭು ಡಿ. ಕೆಳಗಿನ ಮನೆ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾಧವ್, ಪ್ರಕಾಶ ಟಿ, ಗಿರೀಶ ಗೌಡ, ಎಮ್. ಮಂಜಪ್ಪ, ಷಣ್ಮುಖ ಕೆ, ದಾದಾಖಲಂದರ್, ಸಿದ್ದಾನಾಚಯ್ಯ, ರವಿ ಲಮಾಣಿ, ರಾಘವೇಂದ್ರ, ಶಾಂತರಾಜ, ಉಮೇಶ ಬಿನ್ನಾಳ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!