IAS: ಗಿಟ್ಟೆ ಮಾಧವ ವಿಠಲರಾವ್ ದಾವಣಗೆರೆ ಜಿಪಂ ಸಿಇಓ ನೇಮಕ, ಕೊಪ್ಪಳ ಡಿಸಿಯಾಗಿ ಸುರೇಶ್ ಇಟ್ನಾಳ ವರ್ಗಾವಣೆ

ಬೆಂಗಳೂರು: (IAS) ಕರ್ನಾಟಕ ಸರ್ಕಾರದಿಂದ ರಾಜ್ಯದ 16 ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿದೆ. ದಾವಣಗೆರೆ ಜಿಲ್ಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಸಿರೇಶ್ ಇಟ್ನಾಳ್ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ಯಾಗಿ ಹಾಗೂ ಗಿಟ್ಟೆ ಮಾಧವ್ ವಿಠಲ್ ರಾವ್ ಅವರನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ನೂತನ ಸಿಇಓ ಆಗಿ ನೇಮಕ ಮಾಡಲಾಗಿದೆ.
ಗಿಟ್ಟೆ ಮಾಧವ್ ವಿಠಲ ರಾವ್ 2020 ನೇ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಯುಪಿಎಸ್ ನಲ್ಲಿ 210 ನೇ ರ್ಯಾಂಕ್ ಗಳಿಸಿದ್ದಾರೆ.