ಕೆ ಎಂ ಎಫ್ ವತಿಯಿಂದ ನಂದಿನಿ ಸಿಹಿ ಉತ್ಪನ್ನಗಳಿಗೆ ಶೇಕಡ 10 ರಿಯಾಯಿತಿಯ: ಮೇಯರ್ ವೀರೇಶ್ ಉತ್ಸವಕ್ಕೆ ಚಾಲನೆ

ದಾವಣಗೆರೆ :ಶಿವಮೊಗ್ಗ , ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ( ಕೆ.ಎಂ.ಎಫ್ ) ದ ವತಿಯಿಂದ ಇಂದಿನಿಂದ ನಂದಿನಿ ಸಿಹಿ ಉತ್ಪನ್ನಗಳ ಎಂ.ಆರ್.ಪಿ ದರದ ಮೇಲೆ ಗ್ರಾಹಕರಿಗೆ ಶೇಕಡ 10 ರಷ್ಟು ರಿಯಾಯಿತಿ ನೀಡಿ ಆಚರಿಸಲಾಗುತ್ತಿರುವ ನಂದಿನಿ ಸಿಹಿ ಉತ್ಸವಕ್ಕೆ ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ವೀರೇಶ್ ಮತ್ತು ಶಿವಮೊಗ್ಗ , ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಹೆಚ್.ಕೆ ಬಸಪ್ಪ ರವರು ದಾವಣಗೆರೆಯ ಭಗತ್ ಸಿಂಗ್ ನಗರದಲ್ಲಿ ಇರುವ ಶ್ರೀ ಚಂದ್ರಪ್ಪ.ಕೆ.ಜಿ ರವರ ನಂದಿನಿ ಫ್ರಾಂಚೈಸಿ ಪಾರ್ಲರ್ ಮಾರಾಟ ಮಳಿಗೆಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಮಾತಾನಾಡಿದ ಮಾನ್ಯ ಮಹಾಪೌರರು ನಾಡಿನ ರೈತರ ಒಡನಾಡಿಯಾಗಿರುವ ರೈತರ ಶ್ರೇಯೋಭೀವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶಿವಮೊಗ್ಗ , ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ( ಕೆ.ಎಂ.ಎಫ್ ) ಸಂಸ್ಥೆಯು ದಾವಣಗೆರೆ ನಗರದ ವಿವಿಧೆಡೆಗಳಲ್ಲಿ ನಂದಿನಿ ಪಾರ್ಲರ್ ಸ್ಥಾಪಿಸುವ ಮೂಲಕ ನಗರದ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನ ಪೂರೈಸುತ್ತಿರುವುದು ಅಲ್ಲದೇ ನಿರುದ್ಯೋಗಿಗಳ ಆಶಾಕಿರಣ ವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು .
ಒಕ್ಕೂಟದ ಉಪಾಧ್ಯಕ್ಷರು ಮಾತಾನಾಡಿ ಕರ್ನಾಟಕ ಹೃದಯ ಭಾಗದಲ್ಲಿರುವ ದಾವಣಗೆರೆ ನಗರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಒಳಗೊಂಡಂತೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಮತ್ತು ಮೆಗಾ ಡೇರಿ ಸ್ಥಾಪನೆಯ ಅವಶ್ಯಕತೆ ಬಗ್ಗೆ ಮಹಾಪೌರರಿಗೆ ಮನವರಿಕೆ ಮಾಡಿ ಸಂಬಂಧಿಸಿದಂತೆ ಸಹಕಾರ ಕೋರಿದರು . ಸದರಿ ಕಾರ್ಯಕ್ರಮದಲ್ಲಿ ಒಕ್ಕೂಟದ ದಾವಣಗೆರೆ ಜಿಲ್ಲಾ ಮಾರುಕಟ್ಟೆ ಉಸ್ತುವಾರಿ ಅಧಿಕಾರಿಗಳಾದ ಶ್ರೀ ಸುರೇಶ್ ಹುಳ್ಳಿ , ಶ್ರೀ ವಿಜಯ್ ಬಿ.ಎಸ್ , ಸಹಾಯಕ ವ್ಯವಸ್ಥಾಪಕರು ಮತ್ತು ಕೆ.ಎಂ.ಎಫ್ ಡಿಪೋ ಮೇಲ್ವಿಚಾರಕಾರದ ಶ್ರೀ ಪೂಜಾರಿ ಪ್ರಭುರಾಜ್ , ಹಾಗೂ ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು .