ರಾಜ್ಯ ಸುದ್ದಿ

ಮೃತಪಟ್ಟ ಒಂಟಿ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ

ಮೃತಪಟ್ಟ ಒಂಟಿ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ

ಹೊಳಲ್ಕೆರೆ : ಕಳೆದ ವಾರ ಮೃ‍ತಪಟ್ಟಿದ್ದ ಸನ್ಯಾಸಿಯೊಬ್ಬ ಮನೆಯಲ್ಲಿ ಲಕ್ಷ ಲಕ್ಷ ದುಡ್ಡು ಪತ್ತೆಯಾಗಿದೆ. ನಂದೀಶ್ವರ ಮಠದ ಅನುಯಾಯಿಯಾಗಿದ್ದ ಗಂಗಾಧರಯ್ಯ ಶಾಸ್ತ್ರಿ ನಿವಾಸದಲ್ಲಿ ನೋಟು ತುಂಬಿದ ಹಲವು ಚೀಲಗಳು, ಹಣ ತುಂಬಿದ ಕೊಡವೊಂದು ಸಿಕ್ಕಿದೆ. ಈ ಹಣ ಬರೋಬ್ಬರಿ 30 ಲಕ್ಷ ರೂ. ಇದೆ ಎಂದು ತಿಳಿದು ಬಂದಿದೆ. ಒಂಟಿಯಾಗಿ ಬದುಕು ನಡೆಸುತ್ತಿದ್ದಈ ಶಾಸ್ತ್ರಿ. ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಗಂಗಾಧರ ಶಾಸ್ತ್ರಿಗೆ 16ಎಕರೆ‌ ಜಮೀನಿದ್ದು 4ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಕೃಷಿ ಮತ್ತಿತರೆ ಆದಾಯದಿಂದ ಬಂದ ಸುಮಾರು 30ಲಕ್ಷಕ್ಕೂ ಅಧಿಕ ಹಣ ಮನೆಯಲ್ಲಿ ಕೂಡಿಟ್ಟಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46ಸಾವಿರ ರೂ.ಗಳಿಗೂಹೆಚ್ಚಿದೆ.

10 ರೂ., 20 ರೂ., 50 ರೂ., 100 ರೂ., 200 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಸನ್ಯಾಸಿಯ ಮನೆಯಲ್ಲಿ ಸಿಕ್ಕಿದೆ.  ಗಂಗಾಧರಯ್ಯ ಶಾಸ್ತ್ರಿ ಮನೆಯಲ್ಲಿ ತೆಂಗಿನಕಾಯಿ ರಾಶಿ ಕೆಳಗಡೆ ಹಾಗೂ ಅಟ್ಟದ ಮೇಲೆ ಹಣ ಪತ್ತೆಯಾಗಿದೆ. ಗಂಗಾಧರಯ್ಯ ಅವರು ತೆಂಗಿನ ತೋಟದಿಂದ ಬಂದ ಆದಾಯ ಹಾಗೂ ಭಕ್ತರು ನೀಡಿದ ಕಾಣಿಕೆಯನ್ನು ಹಲವು ವರ್ಷಗಳಿಂದ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗಿದೆ.

ಮೃತಪಟ್ಟ ಒಂಟಿ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ

ಅವರಿಗೆ ವಾರಸುದಾರರಿಲ್ಲದ ಕಾರಣ, ಮುಂದಿನ ಶುಕ್ರವಾರ ಅಂದರೆ ಜುಲೈ 7ರಂದು ಭಕ್ತರು ಸಭೆ ಕರೆದು ಸಮಿತಿ ರಚಿಸಲು ಿರ್ಧರಿಸಲಾಗಿದೆ.ಗಂಗಾಧರಯ್ಯ ಅವರ ಜಮೀನಿನಲ್ಲಿ ಗದ್ದುಗೆ ನಿರ್ಮಿಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿಸಲಾಗಿದೆ. ಉಳಿದ ಹಣವನ್ನು ಟ್ರಸ್ಟ್ ರಚಿಸಿ ಸಮಾಜ ಸೇವೆಗೆ ಬಳಸಲು ಭಕ್ತರು ಮುಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top