ಛಾಯಾಗ್ರಹಕರಿಗಾಗಿ ‘ಮದುವೆಯ ಮಧುರ ಕ್ಷಣಗಳು- 2021’ ಛಾಯಾಚಿತ್ರ ಸ್ಪರ್ಧೆ ಆಯೋಜನೆ

ದಾವಣಗೆರೆ: ಜಿಲ್ಲಾ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಸಂಘ ಮತ್ತು ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ 182 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವೃತ್ತಿ ನಿರತ ಛಾಯಾಗ್ರಾಹಕರಿಗಾಗಿ ‘ಮದುವೆಯ ಮಧುರ ಕ್ಷಣಗಳು- 2021’ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3001 ರೂ., ಹಾಗೂ ದ್ವಿತೀಯ ಬಹುಮಾನ 1001 ರೂ., ವಿತರಿಸಲಾಗುತ್ತದೆ. 250 ಪ್ರವೇಶ ಶುಲ್ಕದೊಂದಿಗೆ 2020 ಆಗಸ್ಟ್ನಿಂದ ತೆಗೆದಿರುವ 12X18 ಅಳತೆಯ ಭಾವಚಿತ್ರವನ್ನು ಸೆ.2 ರೊಳಗಾಗಿ ಸಂಸ್ಥೆಯ ವಿಳಾಸಕ್ಕೆ ತಲುಪಿಸಬಹುದಾಗಿದ್ದು, ಸೆ.5 ರಂದು ಬಹುಮಾನ ವಿತರಣೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹೆಚ್. ಕೆ. ಸಿ. ರಾಜು 9743210201, ದುಗ್ಗೇಶ್ 9844575246, ವಿಜಯ್ ಜಾಧವ್ 9341011145 ಇವರನ್ನು ಸಂಪರ್ಕಿಸಬಹುದಾಗಿದೆ.