ನಿವೇಶನಕ್ಕಾಗಿ ಬೇಡಿಕೆ ಸಮೀಕ್ಷೆ ಕರೆದಿದ್ದ ಅವಧಿಯನ್ನು ಸೆಪ್ಟೆಂಬರ್ 4 ರವರೆಗೆ ವಿಸ್ತರಿಸಿದ ದುಡಾ

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾದಿಂದ ನಿವೇಶನಕ್ಕಾಗಿ ಬೇಡಿಕೆ ಸಮೀಕ್ಷೆ ಕರೆದಿದ್ದ ಅವಧಿಯನ್ನು ಸೆ.4 ರವರೆಗೆ ವಿಸ್ತರಿಸಲಾಗಿದೆ.
ದುಡಾ ಸಾರ್ವಜನಿಕರಿಗೆ ನಿವೇಶನಗಳ ನೊಂದಾಣಿಗಾಗಿ ಕಳೆದ 11 ರಿಂದ ಅರ್ಜಿ ಹಾಕಲು ಆಹ್ವಾನಿಸಿ ಇದೇ ಆ.26 ರವರೆಗೆ ಗಡುವು ನೀಡಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ರಹಿತರು ಅರ್ಜಿ ಹಾಕಲು ಮುಂದಾಗುತ್ತಿರುವುದರಿಂದ ಈ ಅವಧಿಯನ್ನು ವಿಸ್ತರಿಸಿರುವುದಾಗಿ ಡೂಡಾ ಆಯುಕ್ತರು ತಿಳಿಸಿದ್ದಾರೆ.