One Lakh Vaccine:ಸೆ.17 ರಂದು ಜಿಲ್ಲೆಯಲ್ಲಿ ಬೃಹತ್ ಲಸಿಕಾ ಮೇಳ: 1 ಲಕ್ಷ ಜನರಿಗೆ ಲಸಿಕಾಕರಣ:ಡಿಸಿ ಮಹಾಂತೇಶ್ ಭೀಳಗಿ

IMG-20210914-WA0051

ದಾವಣಗೆರೆ: ಜಿಲ್ಲೆಯಲ್ಲಿ ಸೆ. 17 ರಂದು ಒಂದು ಲಕ್ಷ ಲಸಿಕೆ ನೀಡುವ ಬೃಹತ್ ಲಸಿಕಾ ಮೇಳ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಲಸಿಕೆ ನೀಡುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೂರು ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ನೀಡಲಾಗುತ್ತಿದ್ದು, ಒಂದು ದಿನದಲ್ಲಿ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಲಸಿಕೆ ಮೇಳದಲ್ಲಿ ಪ್ರತಿ 2 ಗಂಟೆಗೊಮ್ಮೆ ಮಾಹಿತಿ ತೆಗೆದುಕೊಳ್ಳಲಾಗುವುದು. ಹರಿಹರ ದ 31 ವಾರ್ಡಗಳಲ್ಲಿ 31 ತಂಡಗಳು ಕಾರ್ಯ ನಿರ್ವಹಿಸಲಿದ್ದು, ದಾವಣಗೆರೆ ನಗರದಲ್ಲಿ ವಾರ್ಡ್ ವಾರು 45 ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಜಿಲ್ಲೆಯ 195 ಗ್ರಾ.ಪಂ ಗಳ ಕೇಂದ್ರ ಸ್ಥಾನಗಳಲ್ಲಿ 1 ತಂಡ ಕನಿಷ್ಠ 200 ಜನರಿಗೆ ಲಸಿಕೆ ನೀಡಲಿದೆ,ಈ ಸಂಬಂಧ ಈಗಾಗಲೇ ಎಲ್ಲಾ ತಹಶೀಲ್ದಾರ್, ಇಓಗಳು, ಟಿ.ಹೆಚ್ಓ, ಸಿಡಿಪಿಓ ಗಳಿಗೆ ತರಬೇತಿ ನೀಡಲಾಗಿದ್ದು, ನಾಳೆ ತಾಲೂಕು ಮಟ್ಟದ ತರಬೇತಿ ನಡೆಯಲಿದ್ದು ಎಲ್ಲಾ ಬಿ.ಎಲ್.ಓ.ಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆದು ಕೊಂಡಿಲ್ಲದವರ ಪಟ್ಟಿ ತಯಾರಿಸಲಿದ್ದಾರೆ ಎಂದರು.

ಗ್ರಾ.ಪಂ. ಮಟ್ಟದಲ್ಲಿ ಆಟೋ ಪ್ರಚಾರ, ನಗರದಲ್ಲಿ ಕಸದ ಗಾಡಿಗಳಲ್ಲಿ ಪ್ರಚಾರ ವ್ಯವಸ್ಥೆ ಮಾಡಲಾಗುವುದು ಹಾಗೂ ಹಳ್ಳಿಗಳಲ್ಲಿ ಡಂಗೂರ ಬಾರಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ವ್ಯಾಕ್ಸಿನ್ ಗೆ ವಿರೋಧ ಮಾಡಿದ್ದ ಜಾಗಗಳಲ್ಲಿ ಜನರ ಮನವೊಲಿಸಲಾಗುವುದು. ವಿಶೇಷವಾಗಿ ದುಡಿಯುವ ಜನರಿರುವ ಪ್ರದೇಶಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಹಾಗೂ ಬಡ ಜನರು ವಾಸಿಸುವ ಕಡೆ ಕಾರ್ಮಿಕ ಇಲಾಖೆ ವತಿಯಿಂದ ಹೆಚ್ಚಿನ ಪ್ರಚಾರ ನಡೆಸಲಾಗುವುದೆಂದು‌ ಎಂದು ತಿಳಿಸಿದರು.

ತಾಲ್ಲೂಕು ಹಂತದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಲಯನ್ಸ್, ರೆಡ್ ಕ್ರಾಸ್ ನಂತಹ ಸಂಸ್ಥೆಗಳು ಕೈ ಜೋಡಿಸಲಿವೆ. ಒಂದು ರೀತಿ ಚುನಾವಣೆ ನಡೆಸಿದ ರೀತಿಯಲ್ಲಿಯೇ ವ್ಯಾಕ್ಸಿನ್ ಮೇಳ ಯಶಸ್ವಿಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್,ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,ಡಿ.ಹೆಚ್.ಓ
ನಾಗರಾಜ್,ಆರ್ ಸಿ.ಹೆಚ್ ಅಧಿಕಾರಿ ಡಾ ಮೀನಾಕ್ಷಿ, ಎಡಿಸಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಡಾ.ಕಾಳಪ್ಪ, ಡಾ.ಕುಮಾರ್ ಇದ್ದರು.

Leave a Reply

Your email address will not be published. Required fields are marked *

error: Content is protected !!