ಕಳಪೆ ಕಾಮಗಾರಿ: ಚನ್ನಗಿರಿಯಲ್ಲಿ ಸಿಕ್ಕಿಕೊಂಡ ಬೋರ್ವೆಲ್ ಗಾಡಿ

ದಾವಣಗೆರೆ: ರಸ್ತೆ ಕುಸಿದು ಬೋರ್ವೆಲ್ ಗಾಡಿಯೊಂದು ಸಿಕ್ಕಿ ಹಾಕಿಕೊಂಡ ಘಟನೆ ಚನ್ನಗಿರಿ ಸಮೀಪದ ತಿಪ್ಪಗೊಂಡನಹಳ್ಳಿ ಗ್ರಾಮದ ಬಳಿ ನಡೆದಿದೆ.
ಸಣ್ಣ ನಿರಾವರಿ ಇಲಾಖೆಯಲ್ಲಿನ ನಡೆದ ಕಳಪೆ ಕಾಮಗಾರಿಯಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾಡಾಳು ಮಲ್ಲಿಕಾರ್ಜುನ ಮತ್ತು ವಿರೂಪಾಕ್ಷ ಅವರ ಆಪ್ತ ದಿಗ್ಗೇನಹಳ್ಳಿ ನಾಗರಾಜ್ ಇವರಿಗೆ ಸೇರಿದ ಏಜೆನ್ಸಿಯ ಬೋರ್ ವೆಲ್ ಗಾಡಿ ಎನ್ನಲಾಗಿದೆ.