Railway Police: ಒಡವೆಗಳಿದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ದಾವಣಗೆರೆ ರೈಲ್ವೆ ಪೊಲೀಸ್

IMG-20210810-WA0066

ದಾವಣಗೆರೆ: ಬಸ್ಸು, ಆಟೋ, ರೈಲು ಹೀಗೆ ಯಾವುದೇ ವಾಹನಗಳಲ್ಲಿ ಹಣ, ಒಡವೆ ಇದ್ದ ಬ್ಯಾಗುಗಳನ್ನು ಕಳೆದುಕೊಂಡರೆ ಅದು ಸಿಗುವುದು ಸ್ವಲ್ಪ ಅನುಮಾನವೇ, ಒಂದು ವೇಳೆ ಸಿಕ್ಕರೆ ಅಥವಾ ಸಿಕ್ಕವರು ಅದನ್ನು ತಂದು ವಾರಸುದಾರರಿಗೆ ಒಪ್ಪಿಸಿದರೆ ನಿಜಕ್ಕೂ ಅದು ಅದೃಷ್ಟವೇ ಸರಿ.

ಈಗ ಇಂತಹದ್ದೇ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಿನ್ನಾಭರಣ ಇರುವ ಬ್ಯಾಗನ್ನು ಬಿಟ್ಟು ಇಳಿದಿದ್ದು, ಅದನ್ನು ದಾವಣಗೆರೆ ರೈಲ್ವೇ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮುಸ್ತಾಕ್ ಆಹಮದ್ ಹಾಗೂ ಸಿಬ್ಬಂದಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುವ ರೈಲಿನಲ್ಲಿ ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸಿದ್ದ ರುಕಯ್ಯಭಾನು ಮುಲ್ಲಾ ಅವರು ರಾಣೆಬೆನ್ನೂರಿನಲ್ಲಿ ಇಳಿಯುವಾಗ 60 ಗ್ರಾಂ ಬಂಗಾರದ ಒಡವೆ ಮತ್ತು 430 ರೂ., ಇರುವ ಬ್ಯಾಗನ್ನು ಗಾಡಿಯಲ್ಲಿ ಬಿಟ್ಟು ಇಳಿದಿದ್ದಾರೆ.

ನಂತರ ರೈಲಿನಲ್ಲಿ ಬ್ಯಾಗನ್ನು ಬಿಟ್ಟು ಇಳಿದಿರುವುದು ಗಮನಕ್ಕೆ ಬಂದಿದ್ದು, ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಠಾಣೆಯ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಬ್ಯಾಗನ್ನು ಹುಡುಕಲು ಸಫಲರಾಗಿದ್ದಾರೆ.

ಬ್ಯಾಗಿನ ವಾರಸುದರರಾದ ರುಕಯ್ಯಭಾನು ಮುಲ್ಲಾ ಅವರನ್ನು ಠಾಣೆಗೆ ಕರೆಸಿದ ಮುಸ್ತಾಕ್ ಅಹ್ಮದ್ ಬಂಗಾರವಿದ್ದ ಬ್ಯಾಗ್ ಅನ್ನು ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!