ಜಗಳೂರು ತಾಲ್ಲೂಕಿನ ಆರ್ ಟಿ ಐ ಕಾರ್ಯಕರ್ತನ ಭರ್ಬರ ಕೊಲೆ.! ಇಬ್ಬರು ಪೋಲೀಸ್ ವಶಕ್ಕೆ.!

ದಾವಣಗೆರೆ ( ಜಗಳೂರು ): ತಾಲ್ಲೂಕಿನ ಗೌರಿಪುರ ಗ್ರಾಮದ ಯುವಕ, ಸಾಮಾಜಿಕ ಕಾರ್ಯರ್ತ ರಾಮಕೃಷ್ಣ (30) ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದೆ.
ರಾಮಕೃಷ್ಣ ಸ್ನೇಹಿತರ ಜೊತೆ ಹೊಸಕೆರೆ ಸಮೀಪದ ಡಾಬಾದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಪರಸ್ಪರ ವಾಗ್ವಾದ ನಡೆದು ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ.
ನನ್ನ ಮಗ ರಾಮಕೃಷ್ಣ ಕಳೆದ ಎರಡು ವರ್ಷಗಳಿಂದ ಸಂಘಟನೆಯ ಮಾಹಿತಿ ಹಕ್ಕು ಕಾರ್ಯ ಕರ್ತನಾಗಿ ಬಡವರಿಗೆ, ದಲಿತರಿಗೆ, ಸರಕಾರದ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಹೊರಾಟ ನಡೆಸುತ್ತಿದ್ದ.
ಕ್ಯಾಸೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿ ಹಗರಣಗಳನ್ನು ಪತ್ತೆಹಚ್ಚಿ ನ್ಯಾಯ ಕೊಡಿಸಲು ಮುಂದಾಗಿದ್ದ. ಇದಕ್ಕೆ ದ್ವೇಷದಿಂದ ಪಿಡಿಓ ಎಟಿ ನಾಗರಾಜ್ ಅವರ ಕುಟುಂಬದ ಕುಮ್ಮಕ್ಕಿನಿಂದ 8ಜನ ತಂಡದವರು ಡಾಬಾಕ್ಕೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಕಲ್ಲಿನಿಂದ ಬಲವಾಗಿ ಹೊಡೆದು ಕೊಲೆಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೊಲೆಗೆ ಸಂಬಂಧಿಸಿದಂತೆ ಗೌರಿಪುರ ಗ್ರಾಮದ ಅರ್ಜುನ್, ಪ್ರಶಾಂತ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.