ಲೋಕಲ್ ಸುದ್ದಿ

ರೂ.53,140/-ಗಳ ಮೊತ್ತದ ಓಪಿಎಂ ಪಾಪಿಸ್ಟ್ರಾ ಪೌಡರ್ ವಶ – ಆರೋಪಿ ಬಂಧನ

ದಾವಣಗೆರೆ: ಅಬಕಾರಿ ಇಲಾಖೆ ತಂಡ ನಗರದಿಂದ ಹರಿಹರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 48 ರಸ್ತೆಯ ಹತ್ತಿರ ವಾಸಿಸುವ ಹೊಂದಿರುವ ಮಳಿಗೆಯೊಂದರ ಮೇಲೆ ಫೆ.09 ರಂದು ದಾಳಿ ನಡೆಸಿ ಆರೋಪಿ ಅವತಾರ್ ಸಿಂಗ್ ಎಂಬಾತ ಅಕ್ರಮವಾಗಿ ಸಂಗ್ರಹಿಸಿದ್ದ ರೂ.53,140/-ರೂಪಾಯಿ ಮೊತ್ತದ ಓಪಿಎಂ ಪಾಪಿಸ್ಟ್ರಾ ಪೌಡರ್, ಮತ್ತು ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಹರಿಹರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಮನೂರು ಸಮೀಪದ ಗ್ರೀನ್ ಪಾಯಿಂಟ್ ಡಾಬಾದಿಂದ ದು.50 ರಿಂದ 60 ಮೀಟರ್ ದೂರದಲ್ಲಿರುವ ಮಲ್ಲಿಕಾರ್ಜುನ್ ಇಂಜಿನಿಯರಿಂಗ್ ವಕ್ರ್ಸ್ ಮಳಿಗೆಯ ಪಕ್ಕದ ಅವತಾರ್ ಸಿಂಗ್ ಎಂಬುವರು  ಅಕ್ರಮವಾಗಿ 18.320 ಕೆ.ಜಿ ಓಪೊಎಂ ಪಾಪಿಸ್ಟ್ರಾ ಪೌಡರ್, 3.020 ಕೆ.ಜಿ ಓಪಿಎಂ ಪಾಪಿಸ್ಟ್ರಾ ಮತ್ತು 7.290 ಲೀ ಮದ್ಯವನ್ನು  ಜಪ್ತಿ ಮಾಡಿಕೊಂಡು ಸುಮಾರು  53,140  ರೂ ಮೊತ್ತದ ಎನ್.ಡಿ.ಪಿ.ಎಸ್ ಮತ್ತು ಅಬಕಾರಿ ಪದಾರ್ಥಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ರವಿ ಎಂ ಮರಿಗೌಡ್ರ, ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್, ಉಪನಿರೀಕ್ಷಕರಾದ ಮಂಜಪ್ಪ.ಎಂ ಅವರು ದಾಳಿ ನಡೆಸಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!