ಪಬ್ಲಿಕ್ ಟಿವಿ ರಂಗನಾಥ್ ರಿಂದ ಎಸ್ಸೆಸ್, ಎಸ್ಸೆಸ್ಸೆಂ ಭೇಟಿ

ದಾವಣಗೆರೆ: ಇಂದು ದಾವಣಗೆರೆ ನಗರದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರು ಮಾಜಿ ಸಚಿವರು, ಹಾಲಿ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದರು.
ಡಿಸೆಂಬರ್ 4 ರಂದು ಬೆಂಗಳೂರಿನಲ್ಲಿ ನಡೆವ ತಮ್ಮ ಮಗಳ ಮದುವೆಗೆ ಆಮಂತ್ರಣ ಪತ್ರಿಕೆ ನೀಡಿದ ರಂಗನಾಥ್ ಅವರು ಉಭಯಕುಶಲೋಪಹಾರಿ ವಿಚಾರಿಸಿದರು.