ಸೂಳೆಕೆರೆ ಚಳುವಳಿಗೆ ಮುಂದಾದ ಖಡ್ಗ ಸಂಸ್ಥೆ: ಡಿಸಿ ಕಚೇರಿಗೆ ಶೀಘ್ರದಲ್ಲೇ ಕಾಲ್ನಡಿಗೆ ಜಾಥಾ

ದಾವಣಗೆರೆ: ಸೂಳೆಕೆರೆ (ಶಾಂತಿಸಾಗರ) ಸ್ವತಂತ್ರಗೊಳಿಸಿ ಚಳುವಳಿ ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದೆಂದು ಖಡ್ಗ ಸಂಘಟನೆ ತಿಳಿಸಿದೆ.
ಶಾಂತವೀರ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ದಾವಣಗೆರೆ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರಗೆ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದ್ದು, ಸೂಳೆಕೆರೆಯ ನೀರು ಕುಡಿಯುವವರು ಮತ್ತು ಸೂಳೆಕೆರೆಯ ಬಗ್ಗೆ ಆಸಕ್ತಿಯುಳ್ಳವರು ತಮ್ಮ ಹೆಸರುಗಳನ್ನು ನೊಂದಾಯಿಸಲು ಸಂಘಟನೆ ಕರೆ ನೀಡಿದೆ.
ಜಾಥಾಕ್ಕೆ ಬೇಕಾದ ಅನುಮತಿ ದೊರೆತ ನಂತರ ದಿನಾಂಕವನ್ನು ತಿಳಿಸಲಾಗುವುದೆಂದು ತಿಳಿಸಲಾಗಿದೆ.