ಆನೆ ದಾಳಿಗೆ ತುತ್ತಾಗಿದ್ದ ವೈದ್ಯರು ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ

ಆನೆ ದಾಳಿಗೆ ತುತ್ತಾಗಿದ್ದ ವೈದ್ಯರು ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ

ದಾವಣಗೆರೆ: ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್​ಯವರ ಆರೋಗ್ಯದಲ್ಲಿ ಕೊಂಚ ಮಟ್ಟಿನ ಸುಧಾರಣೆ ಕಂಡು ಬಂದಿದೆ. ಈ ನಡುವೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ವಿಶೇಷ ಆ್ಯಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಅವರನ್ನು ಜೀರೋ ಟ್ರಾಫಿಕ್​ನಲ್ಲಿ ಕರೆದೊಯ್ಯಲಾಗುತ್ತಿದೆ.

ಏರ್​ಲಿಫ್ಟ್​ಗೆ ನಡೆದಿತ್ತು ಸಿದ್ಧತೆ:

ಈ ಮೊದಲು ಅವರನ್ನು ಬೆಂಗಳೂರಿಗೆ ಏರ್​ಲಿಫ್ಟ್​ ಮಾಡಲು ಸಿದ್ಧತೆ ನಡೆಸಲಾಗಿತ್ತು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದಕ್ಕಾಗಿ ಸಕಲ ತಯಾರಿ ನಡೆಸಿ ಅರಣ್ಯ ಭವನದಿಂದಲೇ ಅನುಮತಿ ಪಡೆದಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಏರ್​ಲಿಫ್ಟ್ ಪ್ಲಾನ್​ ವಿಫಲವಾಗಿದೆ.

ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ:

ಇದೀಗ ಬಂದ ಮಾಹಿತಿಯ ಪ್ರಕಾರ, ಬೆಂಗಳೂರಿನ ಮಣಿಪಾಲ್​ ಹಾಸ್ಟಿಟಲ್​ನಿಂದ ವಿಶೇಷ ರೆಸ್ಕ್ಯೂ ಟೀಂ ಸ್ಪೆಷಲ್ ಆ್ಯಂಬುಲೆನ್ಸ್​ ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದು, ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯನ್ನು ತಲುಪಲಿದೆ. ಆ್ಯಂಬುಲೆನ್ಸ್​ ತಲುಪುತ್ತಲೆ ಡಾ.ವಿನಯ್​ರನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್​ನಲ್ಲಿ ಶಿಫ್ಟ್ ಮಾಡಲಾಗುತ್ತದೆ.

ಸುಮಾರು ಮೂರುವರೆ ನಾಲ್ಕು ಗಂಟೆಗಳಲ್ಲಿ ಆ್ಯಂಬುಲೆನ್ಸ್​ ರಾಜಧಾನಿ ತಲುಪಲಿದ್ದು, ಅಲ್ಲಿನ ಮಣಿಪಾಲ್​ ಆಸ್ಪತ್ರೆ ಯಲ್ಲಿ ಡಾ.ವಿನಯ್​ರವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆನೆ ದಾಳಿಯಿಂದ ಗಾಯಗೊಂಡಿದ್ದ ವಿನಯ್​ ಚನ್ನಗಿರಿಯ ಸೂಳೆಕೆರೆಯ ಬಳಿಯಲ್ಲಿ ಅಪ್ರಾಪ್ತೆಯೊಬ್ಬರನ್ನು ತುಳಿದು ಸಾಯಿಸಿದ್ದ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಡಾ.ವಿನಯ್​ ಪಾಲ್ಗೊಂಡಿದ್ದರು. ಕಾರ್ಯಾಚರಣೆಯನ್ನು ಲೀಡ್ ಮಾಡುತ್ತಿದ್ದ ಅವರು ಆನೆಗೆ ಡಾರ್ಟ್​ ಮಾಡಿದ್ದರು. ಈ ವೇಳೆ ಆನೆ ಅವರ ಮೇಲೆಯೇ ದಾಳಿ ಮಾಡಿತ್ತು. ಘಟನೆಯಲ್ಲಿ ಆನೆ ದಾಳಿಗೆ ತುತ್ತಾದ ಡಾ.ವಿನಯ್​ರವರ ಕೈಗೆ ಹಾಗು ಬೆನ್ನಿನ ಹುರಿಗೆ ತೀವ್ರವಾದ ಗಾಯಗಳಾಗಿದ್ದವು. ಅಂದು ಅವರನ್ನ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. , ಅಲ್ಲಿಂದ ಇಲ್ಲಿಯವರೆಗೂ ಎಂಐಸಿಯುನಲ್ಲಿ ಡಾ.ವಿನಯ್​ರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಈ ಮಧ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಅವರನ್ನು ಶಿಫ್ಟ್ ಮಾಡಲು ತಜ್ಞ ವೈದ್ಯರ ತಂಡ ನಿರ್ಧರಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!