RainFall Farmer’s Maize Spoil: ಚಿತ್ತಾರದಂತಾ ಚಿತ್ತಾ ಮಳೆಗೆ ಛಿದ್ರವಾದ ಮೆಕ್ಕೆಜೋಳ.! ಪ್ರವಾಹದ ರೀತಿ ಹರಿದ ನೀರಲ್ಲಿ ರೈತನ ಗೋಳಿನ ವಿಡಿಯೋ ವೈರಲ್

rain affected farmers maize

ಹಾವೇರಿ: ಸಂಜೆಯಿಂದ ಸುರಿದ ಭಾರೀ ಮಳೆಗೆ ಕ್ವಿಂಟಾಲ್ ಗಟ್ಟಲೆ ಮಕ್ಕೆಜೋಳ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ರೈತರು ಕಂಗಾಲಾಗಿರುವ ಘಟನೆ ರಾಣೇಬೆನ್ನೂರಿನಲ್ಲಿ ನಡೆದಿದೆ.

ಮೆಕ್ಕೆಜೋಳವನ್ನು ಬಿಸಿಲಿಗೆ ಒಣಗಲು ಹಾಕಿದ ವೇಳೆ ಯಾವುದೇ ಮುನ್ಸೂಚನೆ ನೀಡದೆ ವರುಣರಾಯ ಸುರಿದ ಪರಿಣಾಮ ರಸ್ತೆಯಲ್ಲಿ ಪ್ರವಾಹದ ರೀತಿ ಹರಿದ ನೀರಲ್ಲಿ ಮೆಕ್ಕೆಜೋಳ ಕೊಚ್ಚಿಕೊಂಡು ಹೋಗುತ್ತಿದ್ದು, ಮಳೆಯಲ್ಲಿಯೇ ಮೆಕ್ಕೆಜೋಳವನ್ನು ಮೊಗೆದು ಪುಟ್ಟಿಗೆ ಹಾಕಿಕೊಳ್ಳುತ್ತಿರುವ ರೈತ ಯುವಕರು ಪಾಡು ಮನಕಲಕುಂವತಿದೆ.

ಒಂದೆಡೆ ಧೋ ಎಂದು ಸರಿಯುತ್ತಿರುವ ಮಳೆಯಾದರೆ, ಮತ್ತೊಂದೆಡೆ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳದ ಬೆಳೆ ಮೋರಿಯ ಪಾಲಾಗುತ್ತಿರುವುದನ್ನು ಕಂಡು ಮರುಗುತ್ತಿರುವ ಯುವಕರು ಸಾಧ್ಯವಾದಷ್ಟು ಪುಟ್ಟಿಗೆ ಹಾಕಿಕೊಳ್ಳುತ್ತಿರುವ ವೀಡಿಯೋವೊಂದು ನೋಡುಗರ ಮನಸ್ಸನ್ನು ಹಿಂಡುತ್ತಿದೆ.

ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮಳೆರಾಯ ಮತ್ತಿನ್ನೇನು ಅವಾಂತರ ಮಾಡುವನೋ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!