ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಗೆ ವಿಶ್ವಗುರು ಬಸವ ಸೇನೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ

ದಾವಣಗೆರೆ: ವಿಶ್ವಗುರು ಬಸವ ಸೇನೆ ವತಿಯಿಂದ ಇಂದು ನಗರದ ಗಡಿಯಾರ ಕಂಬದಬಳಿ ರಾಮ ಮಂದಿರಕ್ಕಾಗಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ತ್ಯಜಿಸಿದ ಉತ್ತರ ಪ್ರದೇಶದ ಸಿಎಂ ಕಲ್ಯಾಣ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೇನೆಯ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯ ಶಿವನಗೌಡ ಟಿ ಪಾಟೀಲ, ಶ್ರೀಕಾಂತ ನೀಲಗುಂದ, ಅಭಿಷೇಕ ಪಿ.ಎಳೆಹೋಳೆ, ಪ್ರಶಾಂತ್ ಅಣಜಿ, ಶಿವಾನಂದ ಬೆನ್ನೂರು, ಮುತ್ತಣ್ಣ, ಭಾಗ್ಯ ಪಿಸಾಳೆ, ಪ್ರದೀಪ್ ಸ್ವಾಮಿ, ನವೀನ್, ಅಶೋಕ ಮತ್ತಿತರರು ಉಪಸ್ಥಿತರಿದ್ದರು.