ಪರಿಷತ್ ಸದನವೇನು ಬೀಗರ ಮನೆಯೇ.?

1

ಬೆಂಗಳೂರು: ವಿಧಾನಪರಿಷತ್ ಕಲಾಪ  ಆರಂಭವಾಗುತ್ತಿದ್ದಂತೇ ಸದನದಲ್ಲಿ ಸದಸ್ಯರ ಗೈರು ಹಾಜರಿಗೆ ಗರಂ ಆದಂತ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ  ಹೊರ ಹಾಕಿದರು. ಅಲ್ಲದೇ ಪರಿಷತ್ ಸದಸ್ಯರೇನು ಸದನವನ್ನು ಬೀಗರ ಮನೆ ಎಂದುಕೊಂಡಿದ್ದಾರಾ ಅಂತ ತರಾಟೆಗೂ ತೆಗೆದುಕೊಂಡ ಘಟನೆ ನಡೆಯಿತು. ವಿಧಾನ ಪರಿಷತ್ತಿನ ಪ್ರಶೋತ್ತರ ಕಲಾಪ ಮುಗಿಯುತ್ತಿದ್ದಂತೇ ಶೂನ್ಯ ವೇಳೆಯಲ್ಲಿ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವ ಸಚಿವರ ಹೆಸರನ್ನು ಸಭಾಪತಿ ಬಸವರಾಜ ಹೊರಟ್ಟಿಯವರು ಕರೆದರು.

ಆದ್ರೇ, ಇರಬೇಕಾಗಿದ್ದಂತ ಸಚಿವ ಡಾ.ಕೆ.ಸುಧಾಕರ್, ಡಾ.ಸಿ.ಎನ್ ಅಶ್ವತ್ಥನಾರಾಯಣ  ಹಾಗೂ ವಿ. ಸುನೀಲ್ ಕುಮಾರ್ ಸದನದಲ್ಲಿ ಹಾಜರಿರಲಿಲ್ಲ. ಕೇವಲ ಒಬ್ಬರೇ ಒಬ್ಬ ಸಚಿವರು ಮಾತ್ರ ಹಾಜರಿದ್ದರು. ಇದರಿಂದಾಗಿ ಸಿಟ್ಟಾದಂತ ಸಭಾಪತಿಗಳು, ಸಚಿವರ ಗೈರು ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಚಿವ ಶ್ರೀನಿವಾಸ ಪೂಜಾರಿ, ತಾವು ಶೂನ್ಯವೇಳೆ ಆರಂಭಿಸಿ, 10 ನಿಮಿಷದಲ್ಲಿ ಸಚಿವರು ಬರುತ್ತಾರೆ ಎಂದರು. ವಿಧಾನಪರಿಷತ್ ಸಭಾನಾಯಕ ಶ್ರೀನಿವಾಸ ಪೂಜಾರಿಗೆ, ಇದೇನ್ ಬೀಗರ ಮನೆಯೇ.? ನಾಳೆಯಿಂದ  ಕಡ್ಡಾಯವಾಗಿ ಹಾಜರಿರುವ ಸಚಿವರು ತೆಗೆದುಬಿಡಿ ಎನ್ನುವಂತೆ ಪುಲ್ ಕ್ಲಾಸ್ ತಗೊಂಡರು. ಇನ್ಮುಂದೆ ಈ ರೀತಿ ಸಚಿವರು ಗೈರು ಹಾಜರಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!