ವಿಶ್ವಕಪ್ ಟಿ20 ಭಾರತ-ಪಾಕಿಸ್ತಾನ ಪಂದ್ಯಕ್ಕೆ ಭಾರತ ಗೆಲುವಿಗಾಗಿ ಪೂಜೆ

ದಾವಣಗೆರೆ: ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆದ್ದು ಜಯಶಾಲಿಯಾಗಲಿ ಎಂದು ಬಿಜೆಪಿ ಯುವಮೋರ್ಚಾ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಶ್ರೀ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಭಜರಂಗಿ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ, ಯುವ ಮುಖಂಡರುಗಳಾದ ಕಿರಣ್, ಅಕ್ಷಯ್, ಸಂತೋಷ್, ವರುಣ್, ಯೋಗೀಶ್, ಸಂತೋಷ್, ಮಂಜುನಾಥ್, ಪ್ರವೀಣ್ ಭಾಗಿಯಾಗಿದ್ದರು.