112 ಹೊಯ್ಸಳ ತುರ್ತು ಸ್ಪಂದನೆ, ತುಂಗಭದ್ರಾ ನದಿಗೆ ಹಾರಲು ಹೋಗಿದ್ದ ತಾಯಿ ಮಗು ರಕ್ಷಣೆ

IMG-20250630-WA0032

ದಾವಣಗೆರೆ: (112) ದಿನಾಂಕ: 30-06-2025 ರಂದು ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ಸೇತುವೆ ಬಳಿ ಓರ್ವ ಮಹಿಳೆ ಹಾಗೂ ತನ್ನ ಮಗುವಿನೊಂದೊಂದಿಗೆ ತುಂಗಭದ್ರಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕಂಡುಬಂದಿದ್ದು ಆಗ ಅಲ್ಲಿನ ಸ್ಥಳೀಯರೊಬ್ಬರು ಕೂಡಲೇ 112 ಕ್ಕೆ ಕರೆ ಮಾಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕರಾದ ಲೋಕೇಶ್ ರವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಸದರಿ ಸಂತ್ರಸ್ತೆ ಹಾಗೂ ಮಗುವನ್ನು ರಕ್ಷಣೆ ಮಾಡಲಾಗಿದೆ.

ನಂತರ ಸದರಿ ಸಂತ್ರಸ್ತೆ ಸಾಂತ್ವನ ಮಾಡಿ ವಿಚಾರಿಸಿದ್ದು, ಹೊನ್ನಾಳಿ ತಾಲ್ಲೂಕಿನವರೇ ಆದ ಸದರಿ ಸಂತ್ರಸ್ತೆಯು ಕೌಟಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ನದಿಗೆ ಹಾರಲು ಪ್ರಯತ್ನಿಸಿರುವುದಾಗಿ ತಿಳಿಸಿರುತ್ತಾರೆ. ನಂತರ ಸದರಿ ಸಂತ್ರಸ್ತೆ ಹಾಗೂ ಮಗುವನ್ನು ಹೊನ್ನಾಳಿ ಠಾಣೆಗೆ ಕರೆದೋಯ್ದು ಹೊನ್ನಾಳಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ಕುಮಾರ ರವರ ಬಳಿ ಹಾಜಾರು ಪಡಿಸಿದ್ದು, ಪಿಐ ಹೊನ್ನಾಳಿಯವರು ಸದರಿ ಮಹಿಳೆಗೆ ಸಾಂತ್ವನ ಹೇಳಿ , ದೈರ್ಯ ತುಂಬಿ ಉಪಚರಿಸಿ ಸದರಿ ಸಂತ್ರಸ್ತೆ & ಮಗುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುತ್ತಾರೆ.

ಕೌಟಂಬಿಕ ಕಲಹದಿಂದ ಮನನೊಂದು ನದಿಗೆ ಹಾರಲು ಹೋಗಿದ್ದ ತಾಯಿ ಮಗು ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ 112 ಹೊಯ್ಸಳ ಕರ್ತವ್ಯ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕರಾದ ಲೋಕೇಶ್ ರವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

ಪೊಲೀಸ್ ಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ

ಇತ್ತೀಚಿನ ಸುದ್ದಿಗಳು

error: Content is protected !!