ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಾಬು ಜಗಜೀವನ್ ರಾಂ ಅವರ 115ನೇ ಜನ್ಮ ದಿನಾಚರಣೆ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ (ಡಾ. ಶಾಮನೂರು ಶಿವಶಂಕರಪ್ಪ ಭವನ) ಹಸಿರು ಕ್ರಾಂತಿಯ ಹರಿಕಾರರಾದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ 115ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ರಾದ ಬಿ.ಎಚ್. ವೀರಭದ್ರಪ್ಪ, ಬಾಬು ಜಗಜೀವನ್ ರಾಂ ರವರ ಕಾರ್ಯವೈಕರಿ ಅವರ ಕಾರ್ಯಕ್ರಮಗಳು ದೇಶದ ಆರ್ಥಿಕ, ಸಾಮಾಜಿಕ ದೃಷ್ಟಿಯಿಂದ ಅವಿಸ್ಮರಣೀಯ ಎಂದು ಬಣ್ಣಿಸಿದರು.

ಪಕ್ಷದ ಜಿಲ್ಲಾ ವಕ್ತಾರರಾದ ಶ್ರೀಮತಿ ನಾಗರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ, ಕೆ.ಸಿ.ಲಿಂಗರಾಜ್, ಬಾಬು ಜಗಜೀವನ್ ರಾಂ ರವರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ನಗರ ಪಾಲಿಕೆ ಸದಸ್ಯ ಎ. ನಾಗರಾಜ, ಮುಖಂಡರಾದ ಬಿ.ಎಮ್. ಈಶ್ವರ್,ರವಿ ಧಣಿ, ಜಿ.ರಾಕೇಶ್, ಎಲ್.ಎಂ. ಎಚ್. ಸಾಗರ್, ರಾಘವೇಂದ್ರ ಗೌಡ, ಜೀಕ್ರಿಯ, ಹರೀಶ್ ಎಚ್, ಅವರಗೆರೆ ಮಂಜು, ಯುವರಾಜ್,
ಪಂಚಪ್ಪ ತೇರದಾಳ, ಗೀತಾ ಚಂದ್ರಶೇಖರ್, ರಾಜೇಶ್ವರಿ ಉಮೇಶ್, ಮಂಗಳಮ್ಮ, ಗೀತಾ ಪ್ರಶಾಂತ್,ಸುನೀತ ಭೀಮಣ್ಣ ಇನ್ನು ಮುಂತಾದವರು ಉಪಸ್ಥಿತರಿದ್ದರು.

For News Contact:- garudavoice21@gmail.com   9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!