ಹರಿಹರ ಹಾಗೂ ಜಗಳೂರು PSI ಸೇರಿದಂತೆ ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯ 20 PSI ವರ್ಗಾವಣೆ

ದಾವಣಗೆರೆ: ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿನ ನಾಲ್ಕು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 20 ಮಂದಿ ಪಿ ಎಸ್ ಐ ಗಳನ್ನ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಐಜಿಪಿ ಡಾ.ತ್ಯಾಗರಾಜನ್ ಐಪಿಎಸ್ ರವರು ಆದೇಶ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆಯ ಸುನೀಲ್ ತೇಲಿ ಹಾಗೂ ಜಗಳೂರು ಠಾಣೆಯ ಸಂತೋಷ್ ಭಾಗೋಜಿ ಯವರನ್ನ ಸೇರಿದಂತೆ ಇನ್ನೂ ಐದು ಜನ ಪಿ ಎಸ್ ಐ ಗಳಿಗೂ ವರ್ಗಾವಣೆ ಮಾಡಿ ವಲಯ ಕಚೇರಿಯಲ್ಲಿ ಮುಂದಿನ ಸ್ಥಳ ನಿಯುಕ್ತಿಗಾಗಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಜಗಳೂರು ಠಾಣೆಗೆ ಮಹೇಶ್ ಲಕ್ಷ್ಮಣ ಹೊಸಪೇಟೆ ಹಾಗೂ ಹರಿಹರ ಠಾಣೆಗೆ ಸುರೇಶ್ ನೂತನ ಪಿ ಎಸ್ ಐ ಆಗಿ ವರ್ಗಾವಣೆಯಾಗಿದ್ದಾರೆ.
ಸುದ್ದಿಗಾಗಿ ಸಂಪರ್ಕಿಸಿ:- garudavoice21@gmail.com 9740365719