ದಾವಣಗೆರೆಯಲ್ಲಿ ಇಂದಿನಿಂದ “ಟ್ರಾಫಿಕ್ ಡ್ರೈವ್” : ಸಿಸಿಟಿವಿ ದೃಶ್ಯದಿಂದ ಮನೆಗೆ ಬರುತ್ತೆ ದಂಡದ ಚಲನ್: ವಾದ ಮಾಡಿದ್ರೆ ಕೋರ್ಟ್ ಮೆಟ್ಟಿಲು ತೋರಿಸ್ತಾರೆ ಪೊಲೀಸ್

ದಾವಣಗೆರೆ: ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದ್ದು, ಜುಲೈ 5 ರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಹಾಗೊಂದು ವೇಳೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತೀವ್ರ ಸಂಚಾರ ದಟ್ಟಣೆ ಇರುವ ಕಡೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು, ಸಿಬ್ಬಂದಿ ಕೊರತೆ ಇದ್ದು, 100 ಮಂದಿ ಹೋಂ ಗಾರ್ಡ್ಗಳನ್ನು ಬಳಸಿಕೊಳ್ಳಲಾಗುವುದು ಎಂದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತ ಸಂಭವಿಸಿದಾಗ ತಲೆಗೆ ತೀವ್ರ ಪೆಟ್ಟುಬಿದ್ದು ಸಾವನ್ನಪ್ಪುತ್ತಿದ್ದು, ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ಸಾವು ಸಂಭವಿಸುವುದು ಕಡಿಮೆ. ಹಾಗಾಗಿ ಸವಾರರು ಕಡ್ಡಾಯವಾಗಿ ಐಎಸ್ಐ ಗುರುತಿನ ಹೆಲ್ಮೆಟ್ಗಳನ್ನು ಬಳಸಬೇಕು ಎಂದು ಹೇಳಿದರು.
ಮದ್ಯಪಾನ ಮಾಡಿ ಬೈಕ್ ಚಲಾಯಿಸುವುದು, ಬೈಕ್ಗಳಲ್ಲಿ ಮೂವರು ಸಂಚರಿಸುವುದು, ಹೆಲ್ಮೆಟ್ ಧರಿಸದೇ ಇರುವುದು, ಅಪ್ರಾಪ್ತರು ತೀವ್ರ ವೇಗದಲ್ಲಿ ಬೈಕ್ ಚಲಾಯಿಸುವುದು, ಹೆಚ್ಚು ಶಬ್ಧ ಮಾಡುವುದು ಕಂಡು ಬರುತ್ತಿದ್ದು, ಅವರಿಗೆ ದಂಡ ವಿಧಿಸಲಾಗುವುದು.ಪೊಲೀಸರ ಜೊತೆ ವಾಗ್ವಾದ ಮಾಡಿದರೆ ಅವರಿಗೆ ನ್ಯಾಯಾಲಯಕ್ಕೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಯಿಂದ ಪಾರ್ಕಿಂಗ್ ಸ್ಥಳಗಳ ಪಟ್ಟಿ ತೆಗೆದುಕೊಳ್ಳಲಾಗಿದೆ, ಈ ಹಿಂದ ಸಿಸಿಟಿವಿ ಕ್ಯಾಮರ ಸಹಾಯದಿಂದ ಅಪರಾಧ ಪತ್ತೆ ನಡೆಸಿ ದಂಡ ವಸೂಲಾತಿಯ ವ್ಯವಸ್ಥೆಯನ್ನ ಮುಂದುವರಿಸಲಾಗುತ್ತೆ. ಟ್ರಾಫಿಕ್ ಪೋಲಿಸರು ಬಾಡಿ ಕ್ಯಾಮರ ಧರಿಸುವುದು ಕಡ್ಡಾಯ ಮಾಡಲಾಗುವುದು ಎಂದು ಪತ್ರಿಕಾಘೊಷ್ಟಿಯಲ್ಲಿ ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೆ ಉತ್ತಿರಿಸಿದ್ರು. ಈ ಸಂದರ್ಭದಲ್ಲಿ ಅಡಿಷನಲ್ಲ ಎಸ್ ಪಿ ಎಂ ರಾಜೀವ್ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.
ಎಸ್ ಪಿ ದಾವಣಗೆರೆ ಹಾಗೂ ಎಸ್ ಪಿ ಡಿವಿಜಿ ಸಹಾಯ ಎಂಬ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆಯನ್ನ ತೆರೆದು ಸಹಾಯ ಕೇಳುತ್ತಿದ್ದರು, ಇದರ ಬಗ್ಗೆ ಎಸ್ ಪಿ ಗಮನಕ್ಕೆ ಬಂದ ಕೂಡಲೆ ಶನಿವಾರ ಮದ್ಯಾಹ್ನದ ವೇಳೆಗೆ ನಕಲಿ ಖಾತೆಯನ್ನ ಡಿಲಿಟ್ ಮಾಡಲಾಗಿದೆ ಎಂದು ರಿಷ್ಯಂತ್ ತಿಳಿಸಿದ್ರು.
ಹರಿಹರ ಶಾಸಕ ಎಸ್. ರಾಮಪ್ಪ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಕೋವಿಡ್ ನಿಯಮ ಪಾಲಿಸದೇ ಜನ ನೂಕುನುಗ್ಗಲಾಗಿರುವ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಹಾಗೊಂದು ವೇಳೆ ದೂರು ನೀಡಿದರೆ ಸೂಕ್ತ ಕ್ರಮ ವಹಿಸುತ್ತೇವೆ. – ರಿಷ್ಯಂತ್ ಎಸ್,ಪಿ, ದಾವಣಗೆರೆ