ಧಾರ್ಮಿಕ ದತ್ತಿ ಇಲಾಖೆಯಡಿ ಸಪ್ತಪದಿಯಲ್ಲಿ 4 ಜೋಡಿಗಳು ನವದಾಂಪತ್ಯಕ್ಕೆ

ಜಗಳೂರು: ವಿಧಾನಸಭಾ ಕ್ಷೇತ್ರದ ಉಚ್ಚಂಗಿದುರ್ಗ ಗುಡ್ಡದ ಮೇಲಿನ ಉತ್ಸವಾಂಭ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯಡಿ ಸಪ್ತಪದಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 4 ಜೋಡಿಗಳು ನವದಂಪಾತ್ಯಕ್ಕೆ ಕಾಲಿಟ್ಟರು.
ಈ ವೇಳೆ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮಲ್ಲಪ್ಪ ಮಾತನಾಡಿ, ರಾಜ್ಯವ್ಯಾಪಿ ಧಾರ್ಮಿಕ ದತ್ತಿ ಇಲಾಖೆಯಡಿ ಆಯ್ದ 205 ದೇವಸ್ಥಾನಗಳಲ್ಲಿ ಹುಂಡಿ ಹಣದ ಸದ್ಬಳಕೆಗಾಗಿ ರಾಜ್ಯ ಸರ್ಕಾರ ಸರಳ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಇದರಿಂದ ಬಡ ಕುಟುಂಬಗಳಿಗೆ ವರದಾನವಾಗಲಿದೆ. ಒಂದು ಜೋಡಿಗೆ 40 ಸಾವಿರ ಮೌಲ್ಯದಲ್ಲಿ ಎರಡು ಬಂಗಾರದ ಗುಂಡು, ಒಂದು ತಾಳಿ, ವಸ್ತçಗಳನ್ನು ಖರೀದಿಸಲು ಪ್ರತಿ ವಧುವಿಗೆ 10 ಸಾವಿರ, ವರನಿಗೆ 5 ಸಾವಿರ ಸಹಾಯಧನವನ್ನು ಚೆಕ್ ಮುಖಾಂತರ ದೇಣಿಗೆ ವಿತರಿಸಲಾಗಿದೆ.
ಸರ್ಕಾರ ಪ್ರಥಮ ಬಾರಿಗೆ ಸಪ್ತಪದಿ ಕಾರ್ಯಕ್ರಮ ಘೋಷಿಸಿದೆ. ಮುಂದಿನ ದಿನಗಳಲ್ಲಿ ಐತಿಹಾಸಿಕ ಉತ್ಸವಾಂಭ ದೇವಸ್ಥಾನದ ನೆರೆಹೊರೆಯ ಗ್ರಾಮದ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸಾಕಮ್ಮ ಸಿದ್ದಪ್ಪ, ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಚಂಚೀಲಮ್ಮ, ಯುವರಾಜ್, ಎಸ್. ಕೆಂಚಪ್ಪ, ಪ್ರಧಾನ ಅರ್ಚಕ ಕೆಂಚಪ್ಪ, ಹನುಮಂತಪ್ಪ, ಮುಖಂಡರಾದ ರಾಜಶೇಖರ್ ಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
garudavoice21@gmail.com 9740365719