ರೆಡ್ ಕ್ರಾಸ್ ಸಂಸ್ಥೆಯ ಆಕ್ಸಿಜನ್ ಉತ್ಪಾದನೆ ಘಟಕಕ್ಕೆ ಕರಾವಳಿ ಬ್ಯಾಂಕ್ ನಿಂದ 50000/- ರೂ ಕೊಡುಗೆ

ದಾವಣಗೆರೆ: ಭಾರತೀಯ ರೆಡ ಕ್ರಾಸ್ ಸಂಸ್ಥೆ, ದಾವಣಗೆರೆ ಜಿಲ್ಲಾ ಶಾಖೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ದಾವಣಗೆರೆ ಕರಾವಳಿ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿ ಮತ್ತು ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬಂಟರ್ ಸಂಘದ ವತಿಯಿಂದ 50000/- ರೂ ಮೊತ್ತದ ಚೆಕ್ ನ್ನು ಬ್ಯಾಂಕ್ ನ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಮತ್ತು ನಿರ್ದೇಶಕರಾದ ದಿನೇಶ್. ಕೆ. ಶೆಟ್ಟಿ ಅವರು ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ರಾದ ಡಾ. ಎ. ಎಮ್. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವೈಸ್ ಛೇರ್ಮನ್ ಡಿ.ಎಸ್. ಸಿದ್ದಣ್ಣ, ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕರುಗಳಾದ ಡಾ. ಶಿಲ್ಪಶ್ರೀ, ಇನಾಯತ್ಉಲ್ಲಾ, ಆನಂದಜ್ಯೋತಿ, ರವಿಕುಮಾರ್, ಡಿ.ಎನ್. ಶಿವಾನಂದ, ಶ್ರೀಕಾಂತ ಬಗರೆ, ಅಶೋಕ, ಶಿವಕುಮಾರ್, ವಿನಾಯಕ, ಶಿಲ್ಪರಾಣಿ, ಜ್ಯೋತಿ, ಗಿರೀಶ್, ಪೂಜಾ, ಖಲೀಲ, ಯೋಗಿಶ್ ದೇವರಮನೆ ಉಪಸ್ಥಿತರಿದ್ದರು.
ಶ್ರೀಕಾಂತ ಬಗರೆ
( ಪಬ್ಲಿಕ್ ರಿಲೇಶನ್ ಆಫಿಸರ್ )
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ.
ಮೋ : 9886393695