55 ವರ್ಷ ಅರೇಹಳ್ಳಿ ಗ್ರಾಮಕ್ಕೆ ಅಧ್ಯಕ್ಷ ಪಟ್ಟ! ಗ್ರಾಪಂ ಅಧ್ಯಕ್ಷರಾಗಿ ಹೇಮಾವತಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಶರತ್ ಆಯ್ಕೆ

kariganur

ದಾವಣಗೆರೆ: ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿಯ ಅರೇಹಳ್ಳಿ ಗ್ರಾಮಕ್ಕೆ ಇದೀಗ 55 ವರ್ಷದಿಂದ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಪಟ್ಟ ದಕ್ಕಿದೆ. ಸುಮಾರು 55 ವರ್ಷದಿಂದ ಕಾರಿಗನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಿಗದ ಅರೇಹಳ್ಳಿ ಗ್ರಾಮಸ್ಥರು ಅಧ್ಯಕ್ಷ ಸ್ಥಾನಕ್ಕಾಗಿ ಕಾಯುತ್ತಿದ್ದರು. ಆದರೆ ಇದೀಗ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಹೌದು, ಇಂದು ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿಯಲ್ಲಿ ಅರೇಹಳ್ಳಿ ಗ್ರಾಮದ ಹೇಮಾವತಿ ತಿಪ್ಪೇಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಕಾರಿಗನೂರು ಗ್ರಾಮದ ಶರತ್ ಜಿ.ಎ. ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

55 ವರ್ಷದಿಂದ ಅರೇಹಳ್ಳಿ ಗ್ರಾಮಕ್ಕೆ ಕಾರಿಗನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. 50 ವರ್ಷದ ಹಿಂದೆ ಸೋಮ್ಲನಾಯ್ಕ್ ಎಂಬುವರು ಸುಮಾರು 13 ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಸೋಮ್ಲನಾಯ್ಕ್ ಅವರ ನಂತರ ಇದೀಗ ಹೇಮಾವತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷ ಪಟ್ಟ ಅಲಂಕರಿಸಿದ್ದು ಇತಿಹಾಸ ಮರುಕಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಹೇಮಾ ಜಿ. ನಾಯ್ಕ್ ಅಭಿಯಂತಕರರು ಹಾಗೂ ಕಿರಿಯ ಅಭಿಯಂತಕರು ಅಶೋಕ್ ಕುಮಾರ್ ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಉಪಾಧ್ಯಕ್ಷ ತೇಜಸ್ವಿ ವಿ ಪಟೇಲ್, ಮಾಜಿ ಅಧ್ಯಕ್ಷರಾದ ನೂರ್ ಫಾತೀಮಾ, ಶೇಖರಪ್ಪ, ಗ್ರಾ.ಪಂ ಕಾರ್ಯದರ್ಶಿ ಆಂಜನಪ್ಪ, ಬಿಲ್ ಕಲೆಕ್ಟರ್ ವೀರಭದ್ರಪ್ಪ, ಕಂಪ್ಯೂಟರ್ ಆಪರೇಟರ್ ಲೋಹಿತ್, ನೀರು ನಿರ್ವಹಣ ಮಂಡಳಿ ಸದಸ್ಯರಾದ ಗಂಗಾಧರ್, ಬಸವರಾಜ್, ಹಾಲೇಶ್, ವಿಶೇಷ ವಿಕಲಚೇತನ ಮಕ್ಕಳ ಕಾರ್ಯನಿರ್ವಾಹಕರಾದ ಕುಮಾರ್ ಇದ್ದರು.

garudavoice21@gmal.com 9740365719

Leave a Reply

Your email address will not be published. Required fields are marked *

error: Content is protected !!