ವಿಧಾನಸಭಾ ಚುನಾವಣೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ 6 ಕಾಂಗ್ರೆಸ್, 1 ಬಿಜೆಪಿ ಅಭ್ಯರ್ಥಿಗೆ ಜಯ

ವಿಧಾನಸಭಾ ಚುನಾವಣೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ 6 ಕಾಂಗ್ರೆಸ್, 1 ಬಿಜೆಪಿ ಅಭ್ಯರ್ಥಿಗೆ ಜಯ

ದಾವಣಗೆರೆ : ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 6 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಒಬ್ಬರು ಬಿಜೆಪಿಯಿಂದ ಜಯ ಗಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಯಗಳಿಸಿದವರಲ್ಲಿ ಜಗಳೂರು ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ, ಹರಿಹರ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ಪಿ.ಹರೀಶ್, ದಾವಣಗೆರೆ ಉತ್ತರ ಕಾಂಗ್ರೆಸ್ ಪಕ್ಷದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕಾಂಗ್ರೆಸ್ ಪಕ್ಷದ ಶಾಮನೂರು ಶಿವಶಂಕರಪ್ಪ, ಮಾಯಕೊಂಡ ಕಾಂಗ್ರೆಸ್ ಪಕ್ಷದ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಕಾಂಗ್ರೆಸ್ ಪಕ್ಷದ ಬಸವರಾಜು ವಿ.ಶಿವಗಂಗ, ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಡಿ.ಜಿ.ಶಾಂತನಗೌಡ ಇವರು ಜಯಗಳಿಸಿದ್ದಾರೆ.

ಕ್ಷೇತ್ರವಾರು ವಿವರ: 103.ಜಗಳೂರು; ಮಲ್ಲಾಪುರ ದೇವರಾಜ ಜೆಡಿಎಸ್ 1972, ಬಿ.ದೇವೇಂದ್ರಪ್ಪ ಕಾಂಗ್ರೆಸ್ 50765, ಎಸ್.ವಿ.ರಾಮಚಂದ್ರ ಬಿಜೆಪಿ 49891, ಜಿ.ಸ್ವಾಮಿ ಸಮಾಜವಾದಿ ಪಾರ್ಟಿ 367, ಪಕ್ಷೇತರರಾದ ಪಿ.ಅಜ್ಜಯ್ಯ 149, ಡಿ.ತಿಪ್ಪೇಸ್ವಾಮಿ 114, ದಿವಾಕರ ಓ 93, ನಾಗರಾಜ.ಎಂ 140, ಭೀಮಪ್ಪ ಜಿ.ಎನ್ 869, ರಾಘವೇಂದ್ರ ಕೆ.ಆರ್ 685 ಹಾಗೂ ಹೆಚ್.ಪಿ.ರಾಜೇಶ್ 49442 ಮತಗಳನ್ನು ಪಡೆದಿದ್ದು ಕಾಂಗ್ರೆಸ್ ಪಕ್ಷದ ಬಿ.ದೇವೇಂದ್ರಪ್ಪ ಜಯಗಳಿಸಿದ್ದು ಸಮೀಪದ ಸ್ಪರ್ಧಿ ಬಿ.ಜೆ.ಪಿ.ಯ ಎಸ್.ವಿ.ರಾಮಚಂದ್ರಗಿಂತ 874 ಮತಗಳನ್ನು ಹೆಚ್ಚಿಗೆ ಪಡೆದಿದ್ದಾರೆ.

105.ಹರಿಹರ: ಬಿ.ಪಿ.ಹರೀಶ್ ಬಿಜೆಪಿ 63924, ಶ್ರೀನಿವಾಸ್ ಎನ್.ಹೆಚ್. (ನಂದಿಗಾವಿ) ಕಾಂಗ್ರೆಸ್ 59620, ಹೆಚ್.ಎಸ್.ಶಿವಶಂಕರ್ ಜೆಡಿಎಸ್ 40580, ಗಣೇಶಪ್ಪ ಕೆ.ದುರ್ಗದ ಆಮ್ ಅದ್ಮಿ ಪಾರ್ಟಿ 1488, ಕೃಷ್ಣ.ಎಂ ಉತ್ತಮ ಪ್ರಜಾಕೀಯ ಪಾರ್ಟಿ 697, ಡಿ.ಹನುಮಂತಪ್ಪ ಬಹುಜನ ಸಮಾಜ ಪಾರ್ಟಿ 592, ಪಕ್ಷೇತರರಾದ ಮೂರ್ತಿ ಹೆಚ್.ಕೆ. 360, ಪರಶುರಾಮ ಎಂ. 226, ಜಯಕುಮಾರ ಟಿ.ಹೆಚ್.191, ಬಿ.ಎಸ್.ಉಜ್ಜನಪ್ಪ 140, ಸಂಕೇತ್‍ರಾಜ್ ಎಸ್ 98 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ ಬಿಜೆಪಿ ಬಿ.ಪಿ.ಹರೀಶ್ ಇವರು ಜಯಗಳಿಸಿದ್ದು ಸಮೀಪದ ಸ್ಪರ್ಧಿ ಕಾಂಗ್ರೆಸ್‍ನ ಶ್ರೀನಿವಾಸ್ ಎನ್.ಹೆಚ್. ಇವರಿಗಿಂತ 4304 ಮತಗಳ ಅಂತರದಲ್ಲಿ ಜಯಗಳಿಸಿರುವರು.

106.ದಾವಣಗೆರೆ ಉತ್ತರ: ಲೋಕಿಕೆರೆ ನಾಗರಾಜ್ ಬಿಜೆಪಿ 69547, ಎಸ್.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್ 94019, ಬಾತಿ ಶಂಕರ್ ಜೆಡಿಎಸ್ 935, ಶೀಧರ್ ಪಾಟೀಲ್.ಸಿ ಆಮ್ ಆದ್ಮಿ ಪಾರ್ಟಿ 391, ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಾರ್ಟಿ 1143, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟ್ರ ಸಮಿತಿ 139, ಸುರ್ಜಿತ್.ಜಿ ಸಂಯುಕ್ತ ವಿಕಾಸ್ ಪಾರ್ಟಿ 49, ಪಕ್ಷೇತರರಾದ ಕೀರ್ತಿಕುಮಾರ್.ಕೆ.ಎಸ್ 68, ಮಲ್ಲಿಕಾರ್ಜುನಪ್ಪ.ಕೆ.ಎಂ 108, ಮಹಮ್ಮದ್ ಹಯಾತ್.ಎಮ್ 80, ಇಡ್ಲಿ ಮಂಜು 125, ರುದ್ರೇಶ್ ಗೌಡ 87, ಎಂ.ಜಿ.ಶ್ರೀಕಾಂತ್ 281 ಮತಗಳನ್ನು ಪಡೆದಿರುವರು. ಕಾಂಗ್ರೆಸ್ ಪಕ್ಷದ ಎಸ್.ಎಸ್.ಮಲ್ಲಿಕಾರ್ಜುನ್ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ಲೋಕಿಕೆರೆ ನಾಗರಾಜ್‍ಗಿಂತ 24472 ಮತಗಳನ್ನು ಹೆಚ್ಚಿಗೆ ಪಡೆದು ಜಯಗಳಿಸಿದ್ದಾರೆ.

107.ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 84298, ಅಜಯ್ ಕುಮಾರ್ ಬಿ.ಜಿ. ಭಾರತೀಯ ಜನತಾ ಪಾರ್ಟಿ 56410, ಇಸ್ಮಾಯಿಲ್ ಜಬೀವುಲ್ಲಾ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ 1311, ಅಮಾನುಲ್ಲಾಖಾನ್.ಜೆ ಜೆಡಿಎಸ್ 1296, ಸಾಜಿದ್ ಆಮ್ ಆದ್ಮಿ ಪಾರ್ಟಿ 562, ಈಶ್ವರ ಉತ್ತಮ ಪ್ರಜಾಕೀಯ ಪಾರ್ಟಿ 522, ಮಹಮದ್ ಖಲೀಮ್ ಬಿಎಸ್‍ಪಿ 293, ಗೌಸ್‍ಪೀರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 221, ಭಾರತಿ.ಕೆ ಸೋಷಿಯಲಿಸ್ ಯುನಿಟಿ ಸೆಂಟರ್ ಆಫ್ ಇಂಡಿಯಾ 121, ಹೆಚ್.ಕೆ.ದಾವಲ್ ಸಾಬ್ ಕರ್ನಾಟಕ ರಾಷ್ಟ್ರ ಸಮಿತಿ 57, ಪಕ್ಷೇತರರಾದ ಬಿ.ರಾಜಶೇಖರ್ 233, ಶೇಕ್ ಅಹಮದ್ 164, ನೌಶಿನ್‍ತಾಜ್ 101, ಜಿ.ಆರ್.ಶಿವಕುಮಾರ ಸ್ವಾಮಿ 72, ಈರಣ್ಣ 66 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಮನೂರು ಶಿವಶಂಕರಪ್ಪ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ಅಜಯ್ ಕುಮಾರ್ ಬಿಜಿ ಇವರಿಗಿಂತ 27888 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

108.ಮಾಯಕೊಂಡ: ಆನಂದಪ್ಪ.ಹೆಚ್ ಜೆಡಿಎಸ್ 12857, ಪ್ರೊ.ಧರ್ಮಾನಾಯ್ಕ ಎಸ್. ಆಮ್ ಆದ್ಮಿ ಪಾರ್ಟಿ 512, ಕೆ.ಎಸ್.ಬಸವಂತಪ್ಪ ಕಾಂಗ್ರೆಸ್ 70346, ಎಂ.ಬಸವರಾಜ ನಾಯ್ಕಬಿಜೆಪಿ 34248, ಅಜ್ಜಪ್ಪ.ಎನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ 445, ಚೇತನ್‍ಕುಮಾರ್ ನಾಯ್ಕ.ಕೆ ಉತ್ತಮ ರಾಜಕೀಯ ಪಕ್ಷ 1226, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 223, ಸೋಮಶೇಖರ.ಬಿ ಅಡ್ವಕೇಟ್ ಕರ್ನಾಟಕ ರಾಷ್ಟ್ರ ಸಮಿತಿ 210, ಪಕ್ಷೇತರರಾದ ಎ.ಕೆ.ಗಣೇಶ್ 609, ಬಿ.ಎಂ.ಪುಷ್ಪ. ವಾಗೀಶಸ್ವಾಮಿ 37431, ಮಂಜು ಮಾದಿಗ 192, ಲೋಕೇಶ್.ಪಿ.ಡಿ 586, ಪಿ.ಆರ್.ಶ್ರೀನಿವಾಸ್ 438, ಸವಿತಾಬಾಯಿ ಮಲ್ಲೇಶನಾಯ್ಕ 532 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಕೆ.ಎಸ್.ಬಸವಂತಪ್ಪ ಇವರು ಸಮೀಪ ಸ್ಪರ್ಧಿ ಪಕ್ಷೇತರರಾದ ಬಿ.ಎಂ.ಪುಷ್ಪ ವಾಗೀಶಸ್ವಾಮಿ ಇವರಿಗಿಂತ 32915 ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

109.ಚನ್ನಗಿರಿ: ಆದಿಲ್ ಖಾನ್ ಎಸ್.ಕೆ. ಆಮ್ ಆದ್ಮಿ ಪಾರ್ಟಿ 245, ತೇಜಸ್ವಿ ವಿ.ಪಟೇಲ್ ಜೆಡಿಎಸ್ 1216, ಪ್ರವೀಣ.ಹೆಚ್ ಬಿಎಸ್‍ಪಿ 523, ಬಸವರಾಜು ವಿ.ಶಿವಗಂಗ ಕಾಂಗ್ರೆಸ್ 78263, ಹೆಚ್.ಎಸ್.ಶಿವಕುಮಾರ್ ಬಿಜೆಪಿ 21467, ಚಂದ್ರಶೇಖರ ಚನ್ನಗಿರಿ ಉತ್ತಮ ಪ್ರಜಾಕೀಯ ಪಾರ್ಟಿ 1017, ದೋಣಿಹಳ್ಳಿ ಮಂಜುನಾಥಗೌಡ್ರು ಕರ್ನಾಟಕ ರಾಷ್ಟ್ರ ಸಮಿತಿ 198, ಎಂ.ರೂಪ ಕಗತೂರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 183, ಪಕ್ಷೇತರರಾದ ಕುಬೇಂದ್ರಸ್ವಾಮಿ.ಟಿ 437, ಮಾಡಾಳು ಮಲ್ಲಿಕಾರ್ಜುನ 61828, ಹರೀಶ್ ಹಳ್ಳಿ 470 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜು ವಿ.ಶಿವಗಂಗ ಇವರು ಸಮೀಪದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಇವರಿಗಿಂತ 16435 ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

110.ಹೊನ್ನಾಳಿ: ಡಿ.ಜಿ.ಶಾಂತನಗೌಡ ಕಾಂಗ್ರೆಸ್ 92392, ಎಂ.ಪಿ.ರೇಣುಕಾಚಾರ್ಯ ಬಿಜೆಪಿ 74832, ಗಣೇಶ ಬಿ.ಎ. ಉತ್ತಮ ಪ್ರಜಾಕೀಯ ಪಾರ್ಟಿ 945, ಕುಂಕೋವ ಕೃಷ್ಣಪ್ಪ ಬಿಎಸ್‍ಪಿ 349, ನರಸಿಂಹಪ್ಪ.ಕೆ ಆಮ್ ಆದ್ಮಿ 234, ಹನುಮಂತಪ್ಪ ಸೊರಟೂರು ಕರ್ನಾಟಕ ರಾಷ್ಟ್ರ ಸಮಿತಿ 146, ಪಕ್ಷೇತರರಾದ ವಾಸಪ್ಪ.ಎಂ 254, ದೊಡ್ಡೆತ್ತಿನಹಳ್ಳಿ ಚಂದ್ರಶೇಖರಪ್ಪ 236, ಲಕ್ಷ್ಮಿಕಾಂತ ಹೆಚ್.ಟಿ 176 ಮತಗಳನ್ನು ಪಡೆದಿರುವರು. ಕಾಂಗ್ರೆಸ್ ಪಕ್ಷದ ಡಿ.ಜಿ.ಶಾಂತನಗೌಡ ಇವರು ಸಮೀಪದ ಸ್ಪರ್ಧಿ ಬಿಜೆಪಿಯ ರೇಣುಕಾಚಾರ್ಯ ಇವರಿಗಿಂತ 17560 ಮತಗಳನ್ನು ಹೆಚ್ಚಿಗೆ ಪಡೆದು ಜಯಗಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!