ರಾಜ್ಯದ 92 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ.! ಕೆಟಿಜೆ ನಗರ ವೃತ್ತಕ್ಕೆ ನೂತನ PI

ಬೆಂಗಳೂರು: ರಾಜ್ಯದ 92 ಮಂದಿ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನ ಸರ್ಕಾರ ಇಂದು ವರ್ಗಾವಣೆ ಮಾಡಿ ಆದೇಶಿಸಿದೆ.
ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಬಸವರಾಜ್ ಅವರನ್ನ ಕರ್ನಾಟಕ ಲೋಕಾಯುಕ್ತಕ್ಕೆ ಹಾಗೂ ಶಿಶಿಧರ ಜೆ. ಉಡಚಣ್ಣವರ್ ನೂತನವಾಗಿ ಕೆಟಿಜೆ ನಗರ ವೃತ್ತಕ್ಕೆ ವರ್ಗಾವಣೆ ಸೇರಿದಂತೆ ಒಟ್ಟು 92 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಲಾಗಿದೆ.