ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ನವೀನ್ ಜಯ

ದಾವಣಗೆರೆ: ದಾವಣಗೆರೆ-ಚಿತ್ರದುರ್ಗ ಸ್ಥಳೀಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ವಿಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಮತ್ತು ಬಿಜೆಪಿಯ ನವೀನ್ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಈಗಾಗಲೇ ಎರಡು ಬಾರಿ ನೋವಿನ ಕಹಿ ಉಂಡಿದ್ದ ನವೀನ್ ಅವರು ಈ ಭಾರಿ ಗೆಲುವಿನ ನಗೆ ಬೀರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಸದಸ್ಯರು ನವೀನ್ ಗೆ ಜೈಕಾರ ಹಾಕಿ ಮತದ ಮುದ್ರೆ ಹಾಕುವ ಮೂಲಕ ನವೀನ್ ಅವರಿಗೆ ವಿಜಯದ ಮಾಲೆ ಹಾಕಿ ಮೇಲ್ಮನೆಗೆ ಕಳುಹಿಸಿದ್ದಾರೆ.