ರೈಲು ವಿಳಂಬದ ಕಾರಣ ಕೆಪಿಎಸ್ಸಿ ಪರೀಕ್ಷೆ ಬರೆಯದವರಿಗೆ 29 ಕ್ಕೆ ಮರುಪರೀಕ್ಷೆ

KPSC

ಕಲ್ಬುರ್ಗಿ: ಇದೇ 14ರಂದು ಕರ್ನಾಟಕ ಲೋಕಸೇವಾ ಆಯೋಗವು ಕಲಬುರ್ಗಿ‌ಯಲ್ಲಿ ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ರೈಲು ವಿಳಂಬದಿಂದಾಗಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಆಯೋಗವು ಇದೇ 29ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ಮತ್ತೆ ಅವಕಾಶ ನೀಡಿದೆ.

ಜೋಡಿ ರೈಲು ಮಾರ್ಗ ಕಾಮಗಾರಿಯಿಂದಾಗಿ ಹಾಸನ–ಸೊಲ್ಲಾಪುರ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲುಗಳು ತಡವಾಗಿ ಕಲಬುರ್ಗಿ ತಲುಪಿದ್ದ ಕಾರಣ ಅಭ್ಯರ್ಥಿಗಳು ಕಲಬುರಗಿ ತಲುಪಿ ಮಧ್ಯಾಹ್ನದ ಪರೀಕ್ಷೆಯನ್ನು ಮಾತ್ರ ಬರೆದಿದ್ದರು. ಬೆಳಿಗ್ಗೆಯ ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣಕ್ಕೆ ಸಾವಿರಾರು ಅಭ್ಯರ್ಥಿಗಳು ರಾಯಚೂರು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಆ ರೈಲಿನಲ್ಲಿದ್ದ ಅಭ್ಯರ್ಥಿಗಳಿಗೆ ಮಾತ್ರ 29ರಂದು ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ಮನವಿಪತ್ರ, ರೈಲ್ವೆ ಟಿಕೆಟ್ ಪ್ರತಿ, ಆಯೋಗವು ನೀಡಿದ ಪ್ರವೇಶ ಪತ್ರದ ಪ್ರತಿಯನ್ನು ಆಯೋಗಕ್ಕೆ 22ರೊಳಗೆ ಸ್ಪೀಡ್ ಪೋಸ್ಟ್ ಮೂಲಕ, ಖುದ್ದಾಗಿ ಅಥವಾ kpsc-ka@nic.in ಗೆ ಇ ಮೇಲ್ ಮಾಡಬೇಕು ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!