ವಡ್ಳಾಳ ಗ್ರಾಮದ ಆರೋಗ್ಯ ಕೇಂದ್ರ ಯಾಕೆ ಉದ್ಘಾಟನೆಯಾಗಿಲ್ಲಾ..? ಈ ಪಿ ಹೆಚ್ ಸಿ ನಮ್ಮ ಸಂಸ್ಥೆಗೆ ನೀಡಿ, ಕೊವಿಡ್ ಕೇರ್ ಸೆಂಟರ್ ಮಾಡ್ತೀವಿ

PHC CHANNAGIRI VADNAL VILLAGE

ದಾವಣಗೆರೆ: ಚನ್ನಗಿರಿ ಮಾಜಿ ಶಾಸಕ ವಡ್ನಾಳ ರಾಜಣ್ಣ ತಮ್ಮ ಸ್ವ ಗ್ರಾಮದಲ್ಲಿದ್ದ ಆರೋಗ್ಯ ಕೆಂದ್ರವನ್ನ ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ ಕಟ್ಟಡವನ್ನ ಕಳೆದ 4 ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು, ಅದ್ರೆ ಇದೂವರೆಗೂ ಕಟ್ಟಡ ಉದ್ಘಾಟನೆ ಬಾಗ್ಯ ಕಂಡಿಲ್ಲ ಯಾಕೆ ಅಂತಾ ಕೇಳಿದ್ರೆ ಟೆಕ್ನಿಕಲ್ ಪ್ರಾಬ್ಲಮ್ ಎಂದು ಸುಮ್ಮನಾಗಿದ್ದಾರಂತೆ.ಕಳೆದ ವಿಧಾನಸಭಾ ಅಧಿವೇಶನದಲ್ಲ ಸದರಿ ಆರೋಗ್ಯ ಕೇಂಧ್ರದ ಬಗ್ಗೆ ಚರ್ಚೆಯಾಗಿತ್ತು, ಆರೋಗ್ಯ ಸಚಿವರು ಬಳಿ ಹಾಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮನವಿ ಕೂಡ ಮಾಡಿಕೊಂಡಿದ್ದರು, ಅದ್ರೆ ಇದುವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ.

ಸಂಬಂಧಿಸಿದವರು ಹೇಳುವ ಪ್ರಕಾರ ಈ ಕೇಂದ್ರ ಉದ್ಘಾಟನೆಗೆ ತಾಂತ್ರಿಕ ಕಾರಣವಿದೆಯಂತೆ, ಈ ಕೇಂದ್ರಕ್ಕೆ ಟೆಕ್ನಿಕಲ್ ಪ್ರಾಬ್ಲಮ್ ಇದೆಯಾ ಅಂತಾ ನೋಡಿದಾಗ, ಅಸಲಿ ವಿಷಯವೇ ಬೇರೆ ಇದೆ. ಮಾಜಿ ಶಾಸಕರು ಗ್ರಾಮದ ಹಿತಾಸಕ್ತಿಗಾಗಿ ಬೆಂಗಳೂರಿನ ಕೆ ಎಸ್ ಎಸ್ ಆರ್ ಡಿ ಪಿ ಅವರಿಂದ ಅರೋಗ್ಯ ಕೇಂದ್ರವನ್ನ ನಿರ್ಮಾಣ ಮಾಡಲಾಯಿತು, ಆದ್ರೆ ನಿರ್ಮಾಣವಾಗಿರುವ ಕಟ್ಟಡ ಗೋಮಾಳ ಅಂತಾ ಇತ್ತು, ಅದ್ರೆ ಕಟ್ಟಡ ನಿರ್ಮಾಣವಾಗಿ ಆಡಳಿತಾತ್ಮಕ ಮಂಜೂರಾತಿಗೆ ಕಳಿಸಿದಾಗ ಗೊತ್ತಾಗಿದ್ದು, ಕಟ್ಟಡ ಖಾಸಗಿಯವರಿಗೆ ಸೇರಿದ್ದು ಅಂತಾ, ಇದೀಗ ಖಾಸಗಿ ವ್ಯಕ್ತಿಯೋರ್ವ ನನ್ನ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ ಅಂತಾ ಕಾನೂನು ಸಂಘರ್ಷಕ್ಕೆ ಮುಂದಾಗಿರುವುದೇ ಇದುವರೆಗೂ ಪ್ರಾಥಮಿಕ ಆರೋಗ್ಯ ಉದ್ಘಾಟನೆ ಭಾಗ್ಯ ಕಂಡಿಲ್ಲದಿರುವುದು ಗೊತ್ತಾಗುತ್ತೆ.

ಕಳೆದ 4 ವರ್ಷಗಳಿಂದ ಇದುವರೆಗೂ 1 ಕೋಟಿ 80 ಲಕ್ಷ ವೆಚ್ಚದ ಸುಸಜ್ಜಿತವಾದ ಕಟ್ಟಡ ಪಾಳು ಬಿದ್ದಿದೆ, ಅಂದರೆ ಸರ್ಕಾರದ ಹಣ ( ಸಾರ್ವಜನಿಕರ) ಯಾವ ರೀತಿ ಉಪಯೋಗಕ್ಕೆ ಬರುತ್ತೆ ಎನ್ನುವುದು ಇದೊಂದು ಉತ್ತಮ ಉದಾಹರಣೆ ಅಂತಾ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ. ಇಂತಹ ಕೊವಿಡ್ ಪರಿಸ್ಥಿತಿಯಲ್ಲಿ ಬೆಡ್ ಗಾಗಿ ಅಲೆದಾಡುವ ದಿನಗಳಲ್ಲಿ ಇಂತಹ ಅದೇಷ್ಟೋ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸ್ಥಿತಿಯೂ ಇರಬಹುದೆನೋ..?

ಇದೆಲ್ಲಾ ಒಂದು ಕಡೆಯಾದರೆ ಇದೀಗ ಚನ್ನಗಿರಿ ತಾಲ್ಲೂಕಿನ ವಡ್ನಾಳ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರ ಅನೈತಿಕ ಚಟುವಟಿಕೆಗಳ ತಾಣವಾಗಿದೆ, ಈ ಕಟ್ಟಡವನ್ನ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ವಿಶ್ವ ಕ್ರಾಂತಿ ಸೈನ್ಯ ಸಮಿತಿ ಸಂಸ್ಥೆ, ಕೊವಿಡ್ ಕೇರ್ ಸೆಂಟರ್ ಆಗಿ ತೆರೆಯಲು ಮುಂದೆ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಸಂಸ್ಥೆಯ ಕಾರ್ಯದರ್ಶಿ ಹರೀಶ್ ಹಳ್ಳಿ ಎಂಬುವವರು ದಾವಣಗೆರೆ ಜಿಲ್ಲಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ನಮ್ಮ ಸಂಸ್ಥೆಗೆ ನೀಡಿದ್ರೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಸಂಸ್ಥೆಗಳ ನೆರವು ಪಡೆದು ಕೊವಿಡ್ ಕೇರ್ ಸೆಂಟರ್ ಮಾಡುತ್ತೆವೆ ಎಂದಿದ್ದಾರೆ. ಇದರಿಂದ ಚನ್ನಗಿರಿ ತಾಲ್ಲೂಕಿನ ಸಾರ್ವಜನಿಕರು ಪರಸ್ಥಳಕ್ಕೆ ಹೋಗುವ ಬದಲು ಸ್ಥಳೀಯವಾಗಿ ಕೊವಿಡ್ ಸೊಂಕಿತರ ಆರೈಕೆಗಾಗಿ ಈ ಕಟ್ಟಡವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.ಈ ಭಾಗದ ಸಾರ್ವಜನಿಕರಿಗೆ ತುರ್ತಾಗಿ ವೈಧ್ಯಕೀಯ ಸೆವೆ ಕೂಡ ದೊರೆಯುತ್ತದೆ, ಈ ಹಿನ್ನೆಲೆ ಜಿಲ್ಲಾಧಿಕಾರಿಯವರು ನಮ್ಮ
ಸಂಸ್ಥೆಗೆ ಈ ಕಟ್ಟಡವನ್ನ ನೀಢುವ ಭರವಸೆ ಇದೆ ಅಂತಾರೆ ಸಂಸ್ಥೆಯ ಕಾರ್ಯದರ್ಶಿ ಹರೀಶ್ ಹಳ್ಳಿ.

ಓಟ್ಟಾರೆ ಸರ್ಕಾರ ಮಾಡಬೇಕಿರುವ ಕೆಲಸವನ್ನ ಖಾಸಗಿಯವರು ಮುಂದೆ ಬಂದಿರುವುದು ಒಂದು ಕಡೆಯಾದರೆ, ಸರ್ಕಾರದ ವ್ಯಾಪ್ತಿಯಲ್ಲಿರುವ ಸ್ವತ್ತನ್ನ ಸರಿಯಾಗಿ ಬಳಕೆ ಮಾಡಿಕೊಳ್ಳದೆ ಯಾವುದೋ ತಾಂತ್ರಿಕ ಕಾರಣ ಹೇಳಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ, ಸರ್ಕಾರ ಮನಸ್ಸು ಮಾಡಿದ್ರೆ ಎನೆಲ್ಲಾ ಮಾಡ್ತೀವಿ ಅಂತಾ ಹೇಳೋರು ಇಂತಹ ಪಾಳು ಬಿದ್ದ ಕಟ್ಟಡವನ್ನ ಇದುವರೆಗೂ ಯಾಕೆ ಉಪಯೋಗಕ್ಕೆ ಬಂದಿಲ್ಲ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ…

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!