ಅರಣ್ಯ ಸಚಿವನಾಗಿದ್ದಾಗ ಲೂಟಿ ಮಾಡಿದ್ದಾನೆ : ಇದೀಗ ಲೂಟಿ ಹೊಡೆಯುವ ಖಾತೆಗಾಗಿ ಬ್ಲಾಕ್ ಮೇಲ್ : ಯೋಗೆಶ್ವರ್ ವಿರುದ್ದ ಗುಡುಗಿದ ರೇಣುಕಾಚಾರ್ಯ

ದಾವಣಗೆರೆ :ಕೋವಿಡ್ ಮೊದಲ ಹಂತವನ್ನು ಪಿಎಂ ಹಾಗೂ ಸಿಎಂ ಸಮರ್ಥವಾಗಿ ನಿಬಾಯಿಸಿದ್ದು ಎರಡನೇ ಅಲೆ ಆರಂಭವಾಗಿದೆ. ಕ್ಷೇತ್ರದ ಶಾಸಕರು ಕ್ಷೇತ್ರದ ಕಾವಲುಗಾರನಾಗಿ ಕೆಲಸ ಮಾಡ ಬೇಕಿದೆ.. ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆ ಕರೆಯುವ ಅವಶ್ಯಕತೆ ಇಲ್ಲಾ, ಇದು ನನ್ನ ಅಭಿಪ್ರಾಯ. ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕಾಂಗ ಸಭೆ ಅಗತ್ಯ ಇಲ್ಲಾ. ಯಾರು ಪಕ್ಷದಲ್ಲಿ ತಲೆ ಹರಟೆ ಮಾಡುತ್ತಾರೋ ಅವರನ್ನು ಉಚ್ಚಾಟಿಸಿ ಎಂದು 65 ಶಾಸಕರು ಸಹಿ ಮಾಡಿದ ಪತ್ರ ನನ್ನ ಬಳಿ ಇದೇ. ಅಗತ್ಯ ಬಿದ್ದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾದ್ಯಕ್ಷರಿಗೆ ತಲುಪಿಸುತ್ತೇನೆ. ಬೇರೆ ಪಕ್ಷದಿಂದ ಬಂದು ಯಡಿಯೂರಪ್ಪನವರ ಆಶೀರ್ವಾದದಿಂದ ಶಾಸಕನಾದ,
ಸದಾನಂದ ಗೌಡರ ಅವಧಿಯಲ್ಲಿ ಅರಣ್ಯ ಸಚಿವರಾಗಿ ಲೂಟಿ ಹೊಡೆದರೂ. ನಂತರ ನಮ್ಮ ಪಕ್ಷ ಬಿಟ್ಟು ಸೈಕಲ್ ಏರಿ ಮತ್ತೆ ಬಿಜೆಪಿ ಸೇರಿದ್ದಾನೆ ಎಂದು ಸಿ ಪಿ ಯೋಗೆಶ್ವರ್ ವಿರುದ್ದ ಹರಿಹಾಯದ್ದರು.
ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಪ್ಲಾಟ್ ನಲ್ಲಿ ವಿಜಯೇಂದ್ರ ಅವರ ಖಾಲಿಗೆ ಬಿದ್ದು ವಿಜಯಣ್ಣ ನನ್ನ ಮಂತ್ರಿ ಮಾಡಿ ಎಂದಿದ್ದು ನಾನು ನೋಡಿದ್ದೇನೆ, ಅದೇ ರೀತಿ ಕಾವೇರಿ ಭವನದಲ್ಲಿ ಯಡಿಯೂರಪ್ಪ ಕಾಲು ಹಿಡಿದಿದ್ದನ್ನು ನಾನೇ ನೋಡಿದ್ದೇನೆ. ನಮ್ಮಲ್ಲಿ ಸೋತವರು ಬಹಳಷ್ಟು ಶಾಸಕರು ಎಂ ಎಲ್ ಸಿ ಗಳಿದ್ದರೂ ಯಡಿಯೂರಪ್ಪ ನವರ ಕೃಪಕಟಾಕ್ಷ ದಿಂದ ಸಚಿವರಾಗಿದ್ದೀರಿ. ನೀವು ಶಾಸಕಾಂಗ ಸಭೆ ಕರೆಯಿರಿ ಎಂದು ಹೇಳಲು ಏನು ನೈತಿಕತೆ ಇದೇ. ಇದು ಮೂರು ಭಾಗವಾದ ಸರ್ಕಾರ ಎಂದು ಹೇಳ್ತೀರಿ, ನಿಮಗೇನು ನೈತಿಕತೆ ಇದೇ. ಯಡಿಯೂರಪ್ಪ ನವರ ಆಡಳಿತ ಮೆಚ್ಚಿ ರಾಷ್ಟ್ರದ ಮುಖಂಡರು ಐದು ವರ್ಷ ಸಿಎಂ ಎಂದು ಹೇಳಿದ್ದಾರೆ. ವಿನಾಃ ಕಾರಣ ಪ್ರಹಲ್ಲಾದ್ ಜೋಷಿ ಅವರ ಹೆಸರು ತರುವ ಕೆಲಸ ಮಾಡುತ್ತಿದ್ದೀರಿ.
ದೆಹಲಿಗೆ ಹೋಗಿ ಲಾಭಿ ಮಾಡಿದರೆ ಏನು ಪ್ರಯೋಜನ.ನೀವು ದೆಹಲಿಯಲ್ಲಿ ಯಾವ ನಾಯಕರನ್ನು ಭೇಟಿ ಮಾಡಿಲ್ಲಾ. ಅವರ ಗೇಟು ಮುಟ್ಟಿ ಬಂದು ಪೋಟೋ ತೆಗೆಸಿ ಕೊಂಡಿದ್ದೀರಿ. ಮೂರು ಭಾಗವಾದ ಬಿಜೆಪಿ ಎಂದು ಹೇಳ್ತೀರಲ್ಲಾ ನಿಮಗೇನಿದೆ ನೈತಿಕತೆ. ನನಗೆ ಯಡಿಯೂರಪ್ಪ, ವಿಜಯೇಂದ್ರ ಹೇಳಿಲ್ಲಾ. ನನಗೆ ಸಿಕ್ಸರ್ ಒಡೆಯುವುದು ಗೊತ್ತು ಬೌಂಡರಿ ಹೊಡೆಯುವುದು ಗೊತ್ತು. ತಕ್ಷಣ ನೀನು ರಾಜಿನಾಮೆ ಕೊಡ ಬೇಕು., ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ನಾನು ಒತ್ತಾಯ ಮಾಡ್ತೀನಿ, ಸಿಪಿ ಯೋಗೆಶ್ವರ್ ನನ್ನ ಮೆಗಾಸಿಟಿ ಪ್ರಕರಣದಲ್ಲಿ ಬಂದಿಸ ಬೇಕು.
ಇಂತಹವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಅಖಾಡಕ್ಕೆ ಬಾ ನನಗೆ ಹೇಗೆ ಪಟ್ಟು ಹಾಕ ಬೇಕು ಎಂದು ಗೊತ್ತಿದೆ. ನಾನು ನೇರಾ ನೇರಾ ಆಕಾಡಕ್ಕೆ ಬಾ, ಸಚಿವನಾಗಲು ಕಾಲು ಹಿಡಿದವನು ಈಗ ಅವರ ವಿರುದ್ದ ಮಾತನಾಡ್ತೀಯಾ. ಯಡಿಯೂರಪ್ಪನವರು ಅವರನ್ನ ಸಚಿವರನ್ನಾಗಿ ಮಾಡಿದ್ದೇ ದೊಡ್ಡ ತಪ್ಪು..
2023 ರಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.
ಸಿಪಿ ಯೋಗಿಶ್ವರ್ ಅವರಿಗೆ ಲೂಟಿ ಮಾಡುವ ಖಾತೆ ಬೇಕಂತೆ. ಖಾತೆ ಹಸರಿನಲ್ಲಿ ಬ್ಲಾಕ್ ಮೇಲೆ ಮಾಡಲು ಬಂದರೆ, ನಾವು ಸುಮ್ಮನಿರಲ್ಲ. ಜನರ ರಕ್ಷಣೆ ಮಾಡುವ ಬದಲು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲಾ. ಎಂ ಪಿ ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ