ಸಾಯಿಬಾಬ ಆರಾಧನೆಯಿಂದ ಜೀವನ ಪಾವನ : ಜಿಪಂ ಮಾಜಿ ಅಧ್ಯಕ್ಷೆ ಜಯಶೀಲಾ

18 ನೇ ಶತಮಾನದಿಂದ ಪ್ರಾರಂಭವಾದ ಶಿರಡಿ ಶ್ರೀ ಸಾಯಿಬಾಬ ಆರಾಧನೆ 21ನೇ ಶತಮಾನದಲ್ಲಿ ಸಾಯಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುವುದಷ್ಟೇ ಅಲ್ಲದೆ ಶಿರಡಿಯು ಭಾರತದ ಒಂದು ಮುಖ್ಯ ಶ್ರದ್ಧಾ ಭಕ್ತಿ ಕೇಂದ್ರವೂ ಆಗ ಸಾಯಿಭಾಭಾನ ಆರಾಧನೆಯಿಂದ ಜೀವನ ಪಾವನ ಎಂದು ದಾವಣಗೆರೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಕೆಆರ್.ಜಯಶೀಲಾ ಅಭಿಪ್ರಾಯಪಟ್ಡಿದ್ದಾರೆ.
ಇಂದು ದಾವಣಗೆರೆ ಸಮೀಪ ಹಳೇಬಾತಿ ದೊಡ್ಡ ರಂಗವ್ವನಹಳ್ಳಿಯ ಶ್ರೀ ಶಿರಡಿ ಸಾಯಿಬಾಬ ದೇವಸ್ಥಾನಕ್ಕೆ ಭೇಟಿ ನೀಡಿ ನಿವೃತ್ತ ಇಂಜಿನಿಯರ್ ಚಂದ್ರಶೇಖರಪ್ಪರವರು ನಿರ್ಮಿಸಿರುವ ಸುಂದರ ವಾತವರಣದಲ್ಲಿ ಸಾಯಿಭಾಬಾನ ದೇವಸ್ಥಾನವನ್ನು ಸ್ವಂತ ಹಣದಲ್ಲಿ ನಿರ್ಮಿಸಿದ್ದಕ್ಕೆ ಅವರನ್ನ ಸನ್ಮಾನಿಸಿ ಮುಂದೊಂದು ದಿನ ಈ ಗ್ರಾಮ ಪ್ರವಾಸಿ ತಾಣವಾಗಲಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾ
ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ/ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು
ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಲ್ಲಿ ಸದ್ಗುರುವಿನ ಪಾತ್ರ ಅಪಾರವಾಗಿದ್ದು ಆತನಿಲ್ಲದೆ ಆಧ್ಯಾತ್ಮಿಕ ಹಾದಿಯ ಸಾಧನೆ ಸುಲಭ ಸಾಧ್ಯದ ಮಾತಲ್ಲವೆನ್ನುವುದನ್ನು ಸಾಯಿಬಾಬಾ ಮನಗಂಡಿದ್ದರು. ದುರ್ಗುಣಗಳಿಗೆ ವಿಮುಖರಾಗಿ ಆತ್ಮ ಸಾಕ್ಷಾತ್ಕಾರಕ್ಕೆ ಮೊದಲಾಗಿ ಎಂಬುದೇ ಸಾಯಿಬಾಬ ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಕೊಡುತ್ತಿದ್ದ ಒಂದು ಮುಖ್ಯ ಉಪದೇಶ.
ಸಾಯಿ ಬಾಬಾ ಭಾರತದ ಉದ್ದಗಲಕ್ಕೂ ಸರ್ವ ಕಾಲಿಕ ಅಧ್ಯಾತ್ಮಿಕ ಗುರುವಾಗಿ ಹೊರ ಹೊಮ್ಮಿದ್ದು, ತಮ್ಮ ಭಕ್ತ ಸಮೂಹಕ್ಕೆ ಜೀವನದ ಏರಿಳಿತಗಳ ಬಗ್ಗೆ, ಜೀವಮಾನದ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ, ಸಮರ್ಪಣಾ ಮನೋಭಾವದ, ಸೇವಾ ಮನೋಭಾವ, ಪರೋಪಕಾರ, ದಯಾಪರತೆ, ಕರ್ತವ್ಯ ನಿಷ್ಠೆ ಇನ್ನು ಮುಂತಾದ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಶ್ರೇಷ್ಠ ಗುರುವಾಗಿದ್ದಾರೆ.
ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು “ಮನುಷ್ಯ” ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗು ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಹಾಗು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು ಎನ್ನಲು ಅಡ್ಡಿಯಿಲ್ಲ ಎಂದು ಮೆಲುಕಾಕಿದರು
ಸಾಯಿ ಬಾಬಾ ಬದುಕಿದ್ದು ಮುಸ್ಲೀಮರ ಸಾಮಾನ್ಯ ಮಸೀದಿಯಲ್ಲಿ, ಆದರೆ ಅದೇ ಮಸೀದಿಗೆ ‘ದ್ವಾರಕಾಮಾಯಿ’ ಎಂಬ ಹಿಂದೂ ಹೆಸರು ನಾಮಕರಣ ಮಾಡಿ ಹಿಂದೂ ಮುಸ್ಲೀಮರ ಸಾಮರಸ್ಯದ ಜೀವನಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಇವಿಷ್ಟೇ ಅಲ್ಲದೆ ದಿನ ನಿತ್ಯದ ಜೀವನದಲ್ಲೂ ಬಾಬಾ ಅನೇಕ ಹಿಂದೂ ಆಚರಣೆಗಳನ್ನು ಮತ್ತು ಮುಸ್ಲೀಂ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದರು.
ಇಂಥ ಅದ್ಭುತ ಪವಾಡ ಪುರುಷನ ದೇವಾಲಯವನ್ನ ಹಳೇ ಬಾತಿ ಬಳಿ ನಿವೃತ್ತ ಇಂಜಿನಿಯರ್ ಸ್ವಂತ ಖರ್ಚಿನಿಂದ ಕಟ್ಟಿಸಿದ್ದು ಪರಮಾತ್ಮನ ಸ್ಮರಣೆ ಮಾಡುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಜಯಶೀಲಾ ಪತಿಯರಾದ ಅರ್ಜುನ್.
ಶೋಷಿತ ವರ್ಗದ ಮುಖಂಡರಾದ ಬಾಡದ ಆನಂದರಾಜು ನಗರ ಪಾಲಿಕೆ ಸದಸ್ಯರಾದ ಮಂಜುನಾಯ್ಕ್ ಸಿವಿ.ನರೇಂದ್ರಕುಮಾರ್.ಪರಮೇಶ್ ರವರು ಭೇಟಿ ನೀಡಿ ಸನ್ಮಾನಿಸಿದರು.