ಸಚಿವರು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿ – ಸೈಯದ್ ಖಾಲಿದ್ ಅಹ್ಮದ್

ಬಿಜೆಪಿಯವರು ಸರ್ಕಾರ ನಡೆಸಲು ಬಂದಿಲ್ಲ ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಲು ಅಧಿಕಾರಕ್ಕೆ ಬರುವುದು.ಮೊಟ್ಟೆ ಬೇಡ ,ಬುರ್ಖಾ ಬೇಡ, ಅಂತ ಹೇಳಿ ಮಕ್ಕಳಿಗೆ ಜಾತಿಯ ವೈಷಮ್ಯವನ್ನು ಸನ್ಮಾನ್ಯ ಶಿಕ್ಷಣ ಸಚಿವರು ತುಂಬುತ್ತಿರುವುದನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಖಂಡಿಸಿದ್ದಾರೆ.
ಭಾರತವು ಸರ್ವಧರ್ಮಗಳ ಸಂದೇಶ ಸಾರುವ ಜಾತ್ಯಾತೀತ ರಾಷ್ಟ್ರವಾಗಿದೆ ಇಲ್ಲಿ ಎಲ್ಲ ಧರ್ಮದವರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಸಂವಿಧಾನವು ಸಹ ಧಾರ್ಮಿಕ,ಸಾಂಸ್ಕೃತಿಕ,ಶೈಕ್ಷಣಿಕ ಸ್ವಾತಂತ್ರ ಮತ್ತು ಹಕ್ಕುಗಳನ್ನು ಪ್ರತಿಯೊಬ್ಬರಿಗೂ ನೀಡಿರುವಾಗ ಅದೇ ಸಂವಿಧಾನ ಬದ್ಧವಾಗಿ ಆಯ್ಕೆಯಾಗಿ ಸಚಿವರಾಗಿರುವ ಶಿಕ್ಷಣ ಸಚಿವರಾದ ನಾಗೇಶ್ ರವರು ತಮ್ಮ ಜವಾಬ್ದಾರಿ ಮರೆತು ಬೇಜವಾಬ್ದಾರಿ ಹೇಳಿಕೆ ನೀಡುವುದರ ಮೂಲಕ ಮತ್ತೊಮ್ಮೆ ತಾವೊಬ್ಬ ಬೇಜವಾಬ್ದಾರಿ ಸಚಿವ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ಹರಿಹಾಯ್ದರು.
ಮಾನ್ಯ ಸಚಿವರೇ ರಾಜ್ಯದಲ್ಲಿ ಕೊರೊನಾ ಸಂಕಷ್ಟ ಕಾಲದಿಂದ ಸರಿಯಾಗಿ ಶಾಲೆಗಳು ನಡೆಯುತ್ತಿಲ್ಲ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದಾಗಿ ಅನಾನುಕೂಲವಾಗಿದೆ ಈ ರೀತಿ ಹತ್ತು ಹಲವಾರು ಶೈಕ್ಷಣಿಕ ಸಮಮಸ್ಯೆಗಳನ್ನು ಬಗೆಹರಿಸಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಅದು ಬಿಟ್ಟು ದ್ವೇಷಪೂರಿತ ಹೇಳಿಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುಭಾವನೆಗಳನ್ನು ಕೆರಳಿಸುತ್ತಿದ್ದಾರೆ ಮುಂದೆ ಇದಕ್ಕಾಗುವ ಯಾವುದೇ ಪರಿಣಾಮಗಳಿಗೆ ಸಚಿವರೇ ನೇರ ಕಾರಣವಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬುರ್ಖಾ ಬೇಡ,ಶಿರವಸ್ತ್ರ ಬೇಡ ಅಂತ ಹೇಳುವ ಸಚಿವರು ನಾಳೆ ಹೆಣ್ಣುಮಕ್ಕಳಿಗೆ ಕುಂಕುಮ ಬೇಡ,ಬಳೆ ಹಾಕಬಾರದು,ವಿಭೂತಿ ಹಚ್ಚಬಾರದು ಎಂದು ಆದೇಶಿಸಿದರೂ ಆಶ್ಚರ್ಯವಿಲ್ಲ ಇದಕ್ಕೆಲ್ಲ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ನಾವು ಸಹ ಒಂದು ವಿದ್ಯಾಸಂಸ್ಥೆ,ಕಾಲೇಜು ನಡೆಸುತ್ತಿದ್ದು ಅಲ್ಲಿ ಎಲ್ಲಾ ಧರ್ಮದ ಮಕ್ಕಳು ಓದುತ್ತಿದ್ದು ಇದುವರೆಗೂ ಸಹ ಯಾರಿಗೂ ವಸ್ತ್ರ, ಧರ್ಮದ ಆಚರಣೆಗೆ ಅಡ್ಡಿಪಡಿಸಿಲ್ಲ ಈಗ ಸನ್ಮಾನ್ಯ ಸಚಿವರು ಮಕ್ಕಳ ಮನಸ್ಸಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದು ತಮ್ಮ ಹೇಳಿಕೆ ಹಿಂಪಡೆಯದಿದ್ದಲ್ಲಿ ಮುಂದೆ ಭಾರಿ ಪ್ರತಿಭಟನೆ ರಾಜ್ಯಾದ್ಯಂತ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.