ಡಿಪ್ಲೋಮಾ ಅಂಕ ಪ್ರಮಾಣಪತ್ರಕ್ಕಿಂತ ಉದ್ಯೋಗ ಕೌಶಲ್ಯ ಪ್ರಮಾಣಪತ್ರಕ್ಕೆ ಹೆಚ್ಚು ಮೌಲ್ಯ: ತೇಜಸ್ವಿ ಕಟ್ಟಿಮನಿ

diploma

ದಾವಣಗೆರೆ: ನಗರದ ಜಿಎಂಐಟಿ ಆವರಣದಲ್ಲಿರುವ ಜಿಎಂಐಟಿ ಪಾಲಿಟೆಕ್ನಿಕ್ ವತಿಯಿಂದ ಉದ್ಯೋಗ ಕೌಶಲ್ಯಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರವು ಕೈಗಾರಿಕೆಗಳಿಗೆ ಬೇಕಾದ ಅವಶ್ಯಕ ಕೌಶಲ್ಯಗಳ ಬಗ್ಗೆ ಬೆಳಕು ಚೆಲ್ಲುವ ಮತ್ತು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರಿ ಗೊಳಿಸುವ ಕಾರ್ಯಕ್ರಮವಾಗಿತ್ತು ಎಂದು ಜಿಎಂಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಬಿ.ಆರ್.ಶ್ರೀಧರ್ ತಿಳಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೈಗಾರಿಕೆಗಳಿಗೆ ಡಿಪ್ಲೊಮಾ ವಿದ್ಯಾರ್ಥಿಗಳ ತುಂಬಾ ಅವಶ್ಯಕತೆ ಇದ್ದು, ಅನೇಕ ಪ್ರತಿಷ್ಠಿತ ಕಂಪನಿಗಳು ಈಗಾಗಲೇ ತಮ್ಮ ಸಂದರ್ಶನ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಕಂಪನಿಗಳಾದ ಮಹೇಂದ್ರ ಸಿಐಈ, ಮಹೀಂದ್ರ ಎಲೆಕ್ಟ್ರಿಕ್, ಸೋಗಫಿ ಎಂಜಿನ್ ಸಿಸ್ಟಮ್ಸ್, ದಿವಿಗಿ ವಾರ್ನರ್, ಟಾಟಾ ಅಡ್ವಾನ್ಸ್ಡ್, ಬಿಲ್ ಫೋರ್ಜ್, ಸ್ಟಂಪ್ ಶೂಲೆ ಸೋಮಪ್ಪ, ಟೊಯೋಟಾ, ಬಾಷ್, ಇಫಿ ಡೆವಲಪರ್ಸ್, ಪೂರ್ವಿ ಡೆವಲಪರ್ಸ್, ರಾಮ್ಕೋ ಸಿಮೆಂಟ್, ಮತ್ತು ಹತ್ತು ಹಲವು ಕಂಪನಿಗಳಲ್ಲಿ ಕೆಲಸ ಖಾಲಿ ಇದ್ದು, ಡಿಪ್ಲೋಮ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿವೆ ಎಂದು ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್.ತೇಜಸ್ವಿ ಕಟ್ಟಿಮನಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ವೈ.ಯು.ಸುಭಾಶ್ಚಂದ್ರ, ಸಿ.ಬಿ.ಮಂಜುನಾಥ್, ಎಂ.ಪ್ರವೀಣ್ ಕುಮಾರ, ಎಸ್.ಸೋಮಶೇಖರ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!