ಇದೊಂದು ವೈಫಲ್ಯದ ಬಜೆಟ್ – ದರ್ಶನ್ ಬಳ್ಳೇಶ್ವರ.

ಇದೊಂದು ವೈಪಲ್ಯದ ಬಜೆಟ್ . ಕಳೆದ ಬಜೆಟ್ ನಲ್ಲಿ ಬಜೆಟ್ ಶೇ%20 ರಷ್ಟು ಗುರಿ ಸಾಧಿಸಿದ ಈ ಕೇಂದ್ರ ಸರ್ಕಾರ ಈ ಬಾರಿ ಮತ್ತೊಂದು ಆಶಾ ಗೋಪುರ ಕಟ್ಟಿದೆ ಅಷ್ಟೆ. ಯುಪಿಎ ಸರ್ಕಾರ 2014ರಲ್ಲಿ ಜಿಡಿಪಿ ಯ ಶೇ% 8.6 ರ ಗುರಿ ತಲುಪಿತ್ತು ಆದರೆ ಬಿಜೆಪಿ ಸರ್ಕಾರ 8 ವರ್ಷ ಕಳೆದರು ಇದೀಗ ಶೇ%6.5 ಗುರಿ ಹೊಂದಿರುವುದು ಇವರ ಅವಧಿಯಲ್ಲಿ ದೇಶದ ಅಭಿವೃದ್ದಿ ಹಿನ್ನೆಡೆಯನ್ನು ದಾಖಲೆಗಳ ಮೂಲಕ ಅವರೆ ಒಪ್ಪಿಕೊಂಡಾಂತಾಗಿದೆ.
ಹಾಗೆ ಪ್ರತಿ ವರ್ಷ 2 ಕೋಟಿ ಉದ್ಯೋಗದ ಭರವಸೆ ಹಾಗೆ ಇದ್ದು ಅದರ ಬದಲಾಗಿ ಕಳೆದ 5ವರ್ಷದಲ್ಲಿ ದೇಶದಲ್ಲಿ ಸುಮಾರು 14ಕೋಟಿ ಮಂದಿ ಉದ್ಯೋಗ ಕಳೆದು ಕೊಂಡಿದ್ದಾರೆ. ಆದ್ರೆ ಸರ್ಕಾರ ಇದೀಗ ಬಜೆಟ್ ನಲ್ಲಿ 65 ಲಕ್ಷ ರೋಜಾಗಾರ್ ಭರವಸೆ ನೀಡಿರುವುದು ಹಾಸ್ಯಸ್ಪದ. ಇನ್ನು ಬಡವರ ತಲಾದಾಯ ನಷ್ಟದ ಸರ್ವೆ ವರದಿ ಸರ್ಕಾರದ ಬಳಿ ಇದ್ದರು ಅದನ್ನು ಹೆಚ್ಚಿಸುವ ಬಗ್ಗೆ ಬಜೆಟ್ ನಲ್ಲಿ ಯಾವುದೇ ಸುಧಾರಣೆಗಳು ಇಲ್ಲದಿರುವುದು ಅಪರಿಪೂರ್ಣ ಮುಂಗಡ ಪತ್ರ ಎಂಬುದನ್ನು ತೋರಿಸುತ್ತಿದೆ.
– ದರ್ಶನ ಬಳ್ಳೇಶ್ವರ,
ರಾಜ್ಯ ವಕ್ತಾರ,ಯುವ ಕಾಂಗ್ರೆಸ್